ನಾಡಿನ ನೆಲ, ಜಲ, ಸಂಸ್ಕೃತಿ, ಅಸ್ಮಿತೆಗೆ ಧಕ್ಕೆ ಉಂಟಾದಾಗ ರಕ್ಷಣೆಗೆ ನಿಲ್ಲುವುದು ಪರಿಷತ್ತಿನ ಕರ್ತವ್ಯ. ಕನ್ನಡದ ಬಾವುಟ ಈ ನೆಲದ ಗೌರವದ ಸಂಕೇತ. ಅಂತಹ ಬಾವುಟಕ್ಕೆ ಬೆಂಕಿ ಹಚ್ಚಿರುವುದು ಖಂಡನೀಯ. ಇದು ಕನ್ನಡಿಗರ ಗೌರವಕ್ಕೆ ತುಂಬ ಅಘಾತ ಉಂಟು ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.