ಹಿರೀಸಾವೆ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಬೆಳಗ್ಗೆ ವಿಶ್ವಕರ್ಮ ಸಮಾಜದ ಅರೇಮಾದನಹಳ್ಳಿ ಮಠದ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಬಳಿಕ ಸ್ವಾಮೀಜಿ ಅವರು ಭಕ್ತರ ಕಾರಿನಲ್ಲಿ ಅರೇಮಾದನಹಳ್ಳಿಗೆ ತೆರಳಿದರು.