<p><strong>ಹಾಸನ:</strong> ‘ಏ.18ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ನಕಲಿ ಮತದಾನ ಮಾಡಿಸಿದ್ದಾರೆ’ ಎಂಬ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ದೂರುದಾರರ ಸಮ್ಮುಖದಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಿದರು.</p>.<p>ಪೋಲಿಂಗ್ ಏಜೆಂಟ್ ಆಗಿದ್ದ, ಹೊಳೆನರಸೀಪುರ ತಾಲ್ಲೂಕು ಮಾರಗೋಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಎನ್.ರಾಜು ಮತ್ತು ಮಾಯಣ್ಣ ಎಂಬುವರು, ‘ಅಕ್ರಮ ಮತದಾನ ನಡೆದಿದೆ’ ಎಂದು ದೂರು ನೀಡಿದ್ದರು.</p>.<p>‘ಹೊಳೆನರಸೀಪುರ ತಾಲ್ಲೂಕು ಪಡುವಲಹಿಪ್ಪೆ ಮತಗಟ್ಟೆ ಸಂಖ್ಯೆ 244 ರಲ್ಲಿ ರೇವಣ್ಣ ಅವರ ಸೂಚನೆಯಂತೆ 20ಕ್ಕೂ ಹೆಚ್ಚು ಮಂದಿ ನಕಲಿ ಮತದಾನ ಮಾಡಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದರು.</p>.<p>ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮ ಕಚೇರಿಗೆ ಸಿಸಿಟಿವಿ ದೃಶ್ಯಾವಳಿ ತರಿಸಿಕೊಂಡ ಚುನಾವಣಾಧಿಕಾರಿ, ದೂರುದಾರರ ಸಮ್ಮುಖದಲ್ಲಿ ಕೂಲಂಕಷ ಅವಲೋಕನ ನಡೆಸಿದರು. ಈ ವೇಳೆ ಯಾರಾರು ಅರ್ಧ ಗಂಟೆ ಮತಗಟ್ಟೆಯಲ್ಲಿದ್ದರು. ಯಾರಿಂದ ಅಕ್ರಮ ಮತದಾನ ನಡೆದಿದೆ ಎಂಬುದನ್ನು ದೂರುದಾರರು ಮಾಹಿತಿ ನೀಡಿದರು.</p>.<p>ಇದಾದ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿರುವ ರಾಜು ಮತ್ತು ಮಾಯಣ್ಣ, ‘ಕೆಲವರಿಗೆ ಹೊಳೆನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ ಓಟರ್ ಐಡಿ ಇದ್ದರೂ, ಪಡುವಲಹಿಪ್ಪೆಗೆ ಬಂದು ಅಕ್ರಮ ಮತದಾನ ಮಾಡಿದ್ದಾರೆ. ಹೀಗಿದ್ದರೂ, ಅಲ್ಲಿದ್ದ ಅಧಿಕಾರಿ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಯನ್ನು ಡಿಸಿ ಅವರು ಪರಿಶೀಲಿಸಿದ್ದಾರೆ. ಅಕ್ರಮ ಮತದಾನ ಮಾಡಿದ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ‘ಏ.18ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ನಕಲಿ ಮತದಾನ ಮಾಡಿಸಿದ್ದಾರೆ’ ಎಂಬ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ದೂರುದಾರರ ಸಮ್ಮುಖದಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಿದರು.</p>.<p>ಪೋಲಿಂಗ್ ಏಜೆಂಟ್ ಆಗಿದ್ದ, ಹೊಳೆನರಸೀಪುರ ತಾಲ್ಲೂಕು ಮಾರಗೋಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಎನ್.ರಾಜು ಮತ್ತು ಮಾಯಣ್ಣ ಎಂಬುವರು, ‘ಅಕ್ರಮ ಮತದಾನ ನಡೆದಿದೆ’ ಎಂದು ದೂರು ನೀಡಿದ್ದರು.</p>.<p>‘ಹೊಳೆನರಸೀಪುರ ತಾಲ್ಲೂಕು ಪಡುವಲಹಿಪ್ಪೆ ಮತಗಟ್ಟೆ ಸಂಖ್ಯೆ 244 ರಲ್ಲಿ ರೇವಣ್ಣ ಅವರ ಸೂಚನೆಯಂತೆ 20ಕ್ಕೂ ಹೆಚ್ಚು ಮಂದಿ ನಕಲಿ ಮತದಾನ ಮಾಡಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದರು.</p>.<p>ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮ ಕಚೇರಿಗೆ ಸಿಸಿಟಿವಿ ದೃಶ್ಯಾವಳಿ ತರಿಸಿಕೊಂಡ ಚುನಾವಣಾಧಿಕಾರಿ, ದೂರುದಾರರ ಸಮ್ಮುಖದಲ್ಲಿ ಕೂಲಂಕಷ ಅವಲೋಕನ ನಡೆಸಿದರು. ಈ ವೇಳೆ ಯಾರಾರು ಅರ್ಧ ಗಂಟೆ ಮತಗಟ್ಟೆಯಲ್ಲಿದ್ದರು. ಯಾರಿಂದ ಅಕ್ರಮ ಮತದಾನ ನಡೆದಿದೆ ಎಂಬುದನ್ನು ದೂರುದಾರರು ಮಾಹಿತಿ ನೀಡಿದರು.</p>.<p>ಇದಾದ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿರುವ ರಾಜು ಮತ್ತು ಮಾಯಣ್ಣ, ‘ಕೆಲವರಿಗೆ ಹೊಳೆನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ ಓಟರ್ ಐಡಿ ಇದ್ದರೂ, ಪಡುವಲಹಿಪ್ಪೆಗೆ ಬಂದು ಅಕ್ರಮ ಮತದಾನ ಮಾಡಿದ್ದಾರೆ. ಹೀಗಿದ್ದರೂ, ಅಲ್ಲಿದ್ದ ಅಧಿಕಾರಿ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಯನ್ನು ಡಿಸಿ ಅವರು ಪರಿಶೀಲಿಸಿದ್ದಾರೆ. ಅಕ್ರಮ ಮತದಾನ ಮಾಡಿದ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>