ತಾಯಿ ಚೀರಾಡುವ ಶಬ್ಧ ಕೇಳಿದ ಮಗ ಕುಮಾರ, ಮನೆಯೊಳಗಿಂದ ಓಡಿ ಬಂದಾಗ ಚಿರತೆ ಅಲ್ಲೇ ಇತ್ತು. ತಕ್ಷಣ ಉಪಾಯ ಮಾಡಿದ ಕುಮಾರ, ಪಂಚೆಯನ್ನು ಚಿರತೆ ಮೇಲೆ ಎಸೆದು ಸಾವಿನ ದವಡೆಯಿಂದ ತಾಯಿಯನ್ನು ಪಾರು ಮಾಡಿದ್ದಾನೆ. ನಿಂಗಮ್ಮ ಅವರ ಕೈ ಮತ್ತು ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.