<p><strong>ಹಾಸನ:</strong> 'ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮದುವೆ ಮಾತುಕತೆ ನಡೆದು ಕೆಲ ದಿನದಲ್ಲಿಯೇ ಯುವತಿ ಮಾನಸಾ ಹಸೆಮಣೆ ಏರಬೇಕಿತ್ತು. ಇದೇ ಮದುವೆಯಲ್ಲಿ ನವವಧು ಗೆಳತಿಯೊಂದಿಗೆ ನವ್ಯಾ ಸಂಭ್ರಮ ಆಚರಿಸಬೇಕಾಗಿತ್ತು’</p>.<p>ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ಗೆಳತಿಯರಾದ ಮಾನಸ ಹಾಗೂ ನವ್ಯಾ ಅವರ ಕುಟುಂಬಗಳು ಹೀಗೆ ತೀವ್ರ ಶೋಕದಲ್ಲಿ ಮುಳುಗಿವೆ.</p>.<p>‘ಇಬ್ಬರು ಬಾಲ್ಯದಿಂದಲೂ ಜೊತೆಗೆ ಆಡಿ, ಬೆಳೆದು ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳಿಂದ ಇಬ್ಬರೂ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಒಟ್ಟೊಟ್ಟಿಗೇ ಜೀವ ಬಿಟ್ಟರು’ ಎಂಬುದು ಕುಟುಂಬಗಳ ಸಂಕಟ.</p>.<h2>ತಂದೆಯ ಕಣ್ಣೀರು:</h2>.<p>ಹಾಸನದ ನಿವಾಸಿ ಮಾನಸ ಅವರ ತಂದೆ ಚಂದ್ರೇಗೌಡ, ‘ಮಗಳ ಮದುವೆ ಕುರಿತು ಭಾನುವಾರ ಮಾತುಕತೆ ನಡೆಸಲು ನಿರ್ಧರಿಸಿದ್ದಾಗಲೇ ದುರ್ಘಟನೆ ಸಂಭವಿಸಿರುವುದು ಕುಟುಂಬಕ್ಕೆ ಅಪಾರ ಆಘಾತ ತಂದಿದೆ’ ಎಂದು ಕಣ್ಣೀರಿಟ್ಟರು.</p>.<p>ಎರಡು ದಿನಗಳ ಹಿಂದೆ ಮಗಳೊಂದಿಗೆ ಮಾತನಾಡಿದ್ದನ್ನು ಸ್ಮರಿಸಿದ ಅವರು, ‘ಮೃತದೇಹ ಶೀಘ್ರ ಪತ್ತೆಯಾಗುವ ಸಾಧ್ಯತೆ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ’ ಎಂದರು.</p>.<h2>ಶತ್ರುಗಳಿಗೂ ಬಾರದಿರಲಿ:</h2>.<p>‘ಇಂತಹ ಕಷ್ಟ ಯಾವ ಶತ್ರುವಿಗೂ ಬಾರದಿರಲಿ’ ಎಂದು ನವ್ಯಾ ಅವರ ತಂದೆ ಮಂಜಪ್ಪ ಕಣ್ಣೀರಿಟ್ಟರು.</p>.<p>‘ನವ್ಯಾ ಅವರ ಮೃತದೇಹ ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದ್ದು, ಸೋಮವಾರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> 'ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮದುವೆ ಮಾತುಕತೆ ನಡೆದು ಕೆಲ ದಿನದಲ್ಲಿಯೇ ಯುವತಿ ಮಾನಸಾ ಹಸೆಮಣೆ ಏರಬೇಕಿತ್ತು. ಇದೇ ಮದುವೆಯಲ್ಲಿ ನವವಧು ಗೆಳತಿಯೊಂದಿಗೆ ನವ್ಯಾ ಸಂಭ್ರಮ ಆಚರಿಸಬೇಕಾಗಿತ್ತು’</p>.<p>ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ಗೆಳತಿಯರಾದ ಮಾನಸ ಹಾಗೂ ನವ್ಯಾ ಅವರ ಕುಟುಂಬಗಳು ಹೀಗೆ ತೀವ್ರ ಶೋಕದಲ್ಲಿ ಮುಳುಗಿವೆ.</p>.<p>‘ಇಬ್ಬರು ಬಾಲ್ಯದಿಂದಲೂ ಜೊತೆಗೆ ಆಡಿ, ಬೆಳೆದು ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳಿಂದ ಇಬ್ಬರೂ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಒಟ್ಟೊಟ್ಟಿಗೇ ಜೀವ ಬಿಟ್ಟರು’ ಎಂಬುದು ಕುಟುಂಬಗಳ ಸಂಕಟ.</p>.<h2>ತಂದೆಯ ಕಣ್ಣೀರು:</h2>.<p>ಹಾಸನದ ನಿವಾಸಿ ಮಾನಸ ಅವರ ತಂದೆ ಚಂದ್ರೇಗೌಡ, ‘ಮಗಳ ಮದುವೆ ಕುರಿತು ಭಾನುವಾರ ಮಾತುಕತೆ ನಡೆಸಲು ನಿರ್ಧರಿಸಿದ್ದಾಗಲೇ ದುರ್ಘಟನೆ ಸಂಭವಿಸಿರುವುದು ಕುಟುಂಬಕ್ಕೆ ಅಪಾರ ಆಘಾತ ತಂದಿದೆ’ ಎಂದು ಕಣ್ಣೀರಿಟ್ಟರು.</p>.<p>ಎರಡು ದಿನಗಳ ಹಿಂದೆ ಮಗಳೊಂದಿಗೆ ಮಾತನಾಡಿದ್ದನ್ನು ಸ್ಮರಿಸಿದ ಅವರು, ‘ಮೃತದೇಹ ಶೀಘ್ರ ಪತ್ತೆಯಾಗುವ ಸಾಧ್ಯತೆ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ’ ಎಂದರು.</p>.<h2>ಶತ್ರುಗಳಿಗೂ ಬಾರದಿರಲಿ:</h2>.<p>‘ಇಂತಹ ಕಷ್ಟ ಯಾವ ಶತ್ರುವಿಗೂ ಬಾರದಿರಲಿ’ ಎಂದು ನವ್ಯಾ ಅವರ ತಂದೆ ಮಂಜಪ್ಪ ಕಣ್ಣೀರಿಟ್ಟರು.</p>.<p>‘ನವ್ಯಾ ಅವರ ಮೃತದೇಹ ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದ್ದು, ಸೋಮವಾರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>