ಈ ಹೋರಾಟದ ಪೂರ್ವಭಾವಿಯಾಗಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಫ಼ೆ. 18 ರಂದು ಆಲೂರು, 19 ಚನ್ನರಾಯಪಟ್ಟಣ, 20 ಹೊಳೆನರಸೀಪುರ, 22 ಹಾಸನ, 23 ಅರಕಲಗೂಡು, 24 ಅರಸೀಕೆರೆ, 25 ಸಕಲೇಶಪುರ ಮತ್ತು 26 ರಂದು ಬೇಲೂರಿನಲ್ಲಿಕಾರ್ಮಿಕರು ಶಾಸಕರ ಕಚೇರಿಗೆ ತೆರಳಿ, ಬಜೆಟ್ ಅಧಿವೇಶನದಲ್ಲಿ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರ ಪರವಾಗಿ ನಿಲ್ಲುವಂತೆ ಮನವಿ ಮಾಡಲಾಗುವುದು ಎಂದರು.