ಶುಕ್ರವಾರ, 15 ಆಗಸ್ಟ್ 2025
×
ADVERTISEMENT
ADVERTISEMENT

Coconut Crop Disease: ರಾಜ್ಯದಲ್ಲಿ 4.73 ಲಕ್ಷ ಹೆಕ್ಟೇರ್‌ ತೆಂಗಿಗೆ ರೋಗಬಾಧೆ

Published : 14 ಆಗಸ್ಟ್ 2025, 23:30 IST
Last Updated : 14 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯಲ್ಲಿ ಮನೆಗಳಿಗೆ ತೆರಳಿ ತೆಂಗಿನ ಚಿಪ್ಪು ಖರೀದಿಸಲಾಗುತ್ತಿದೆ
ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯಲ್ಲಿ ಮನೆಗಳಿಗೆ ತೆರಳಿ ತೆಂಗಿನ ಚಿಪ್ಪು ಖರೀದಿಸಲಾಗುತ್ತಿದೆ
ಹಾಸನವೂ ಸೇರಿದಂತೆ ರಾಜ್ಯದಲ್ಲಿ ತೆಂಗು ಬೆಳೆ ರೋಗಬಾಧೆ ಹೆಚ್ಚಾಗುತ್ತಿದ್ದು ತೆಂಗು ಇಳುವರಿ ಗಣನೀಯವಾಗಿ ಕುಂಠಿತವಾಗುತ್ತಿದೆ. ರೈತರು ಸಂಕಷ್ಟ ಅನುಭವಿಸುವಂತಾಗಿದೆ
ಸಿ.ಎನ್‌. ಬಾಲಕೃಷ್ಣ ಶ್ರವಣಬೆಳಗೊಳ ಕ್ಷೇತ್ರದ ಶಾಸಕ
ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕೆ ಗೋನಿಯೋಜಸ್ ಪರೋಪಜೀವಿ ಉತ್ಪಾದಿಸಿ ಉಚಿತವಾಗಿ ವಿತರಿಸಲು ₹ 50 ಲಕ್ಷ ಹೆಚ್ಚುವರಿ ಅನುದಾನ ನೀಡುವಂತೆ ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಎಸ್‌.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವ
ಕುಸಿದ ಇಳುವರಿ: ಹೆಚ್ಚಿದ ಬೆಲೆ
ತೆಂಗಿಗೆ ವಿವಿಧ ರೋಗಗಳು ಕಾಡುತ್ತಿದ್ದು ಕಲ್ಪವೃಕ್ಷದ ಉತ್ಪಾದನೆ ಕುಸಿತವಾಗಿದೆ. ಇದರ ಪರಿಣಾಮವಾಗಿ ತೆಂಗಿನ ಉತ್ಪನ್ನಗಳ ಬೆಲೆ ಗಗನಕ್ಕೆ ಏರುತ್ತಿದೆ. ತೆಂಗಿನ ಕಾಯಿಗೆ ₹60 ರಿಂದ ₹75 ಬೆಲೆ ಇದ್ದು ಎಳನೀರಿಗೆ ₹60 ರಿಂದ ₹70 ಬೆಲೆ ಇದೆ. ಕೊಬ್ಬರಿಯ ಧಾರಣೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹25 ಸಾವಿರದಿಂದ ₹30ಸಾವಿರ ಇದ್ದರೆ ಒಂದು ತೆಂಗಿನ ಚಿಪ್ಪಿಗೆ ₹2.50ರಿಂದ ₹ 3 ಹಾಗೂ ಒಂದು ಸಾವಿರ ತೆಂಗಿನ  ಸಿಪ್ಪೆಯ (ಮಟ್ಟೆ) ಬೆಲೆ ₹800 ರಿಂದ ₹ 1 ಸಾವಿರವರೆಗಿದೆ. ಹಾಸನ ಜಿಲ್ಲೆಯಲ್ಲಿ ಗುಜರಿ ಸಂಗ್ರಹಿಸುವ ಮಾದರಿಯಲ್ಲಿ ತೆಂಗಿನ ಚಿಪ್ಪು ನಾರನ್ನು ಖರೀದಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT