ಸರ್ಕಾರ ಬೀಳಿಸಲು ಸಹಕರಿಸಿದ್ದ ಎಚ್.ವಿಶ್ವನಾಥ್ ಅವರ ಅಳಿಯನನ್ನು ಲೋಕೋಪಯೋಗಿ ಇಲಾಖೆ ಮೈಸೂರು ವಿಭಾಗದ ಮುಖ್ಯ ಎಂಜಿನಿಯರ್ ಆಗಿ ಮಾಡುವ ಮೂಲಕ ಯಡಿಯೂರಪ್ಪ ಗುರು ಕಾಣಿಕೆ ನೀಡಿದ್ದಾರೆ. ಕುಮಾರಸ್ವಾಮಿ ಗೌಡರ ಮಾತು ಕೇಳದೆ ಕೆಲವು ತಪ್ಪು ಮಾಡಿದರು. ನಾರಾಯಣಗೌಡಗೆ ಟಿಕೆಟ್ ನೀಡದಂತೆ ದೇವೇಗೌಡರು ಹೇಳಿದರೂ ಕೇಳದೆ, ಆತನನ್ನು ನಂಬಿ ಕುಮಾರಸ್ವಾಮಿ ಟಿಕೆಟ್ ಕೊಟ್ಟರು. ಈ ವರೆಗೆ ಹಾಸನ ಜಿಲ್ಲೆ ರಾಜಕಾರಣ ಮಾಡುತ್ತಿದ್ದೆ, ಇನ್ನು ಮುಂದೆ ಕುಮಾರಸ್ವಾಮಿಗೆ ಹೆಗಲಿಗೆ ಕೊಟ್ಟು ನಿಲ್ಲುತ್ತೇನೆ ಎಂದು ತಿಳಿಸಿದರು.