ನಗರದ ರಂಗೋಲಿ ಹಳ್ಳಿ ನಿವಾಸಿ ರಘುಗೌಡ ಮೃತ ಯುವಕ. ಅರಳೀಕಟ್ಟೆ ವೃತ್ತದ ಟೀ ಅಂಗಡಿ ಬಳಿ ನಿಂತಿದ್ದ ರಘು ಮೇಲೆ ಬೈಕ್ನಲ್ಲಿ ಬಂದ ರಂಗೋಲಿ ಹಳ್ಳ ನಿವಾಸಿಗಳಾದ ಭವಿತ, ತೇಜಸ್ ಹಾಗೂ ಮತ್ತಿಬ್ಬರು ಬಂದು ಏಕಾಏಕಿ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಅಂಗಡಿಯೊಂದಕ್ಕೆ ನುಗ್ಗಿದರೂ ಬಿಡದೆ ಅಟ್ಟಾಡಿಸಿಕೊಂಡು ಹೋಗಿ ಕಣ್ಣಿಗೆ ಖಾರದ ಪುಡಿ ಎರಚಿ, ಕೊಚ್ಚಿ ಪರಾರಿಯಾಗಿದ್ದಾರೆ.ರಘುವಿನ ಕೈ ಬೆರಳು ತುಂಡಾಗಿ ಬಿದ್ದಿದೆ.