<p><strong>ಹಿರೀಸಾವೆ:</strong> ‘ಹೋಬಳಿಯ ಸೋರೆಕಾಯಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹರೀಶ್ ಪಾನಮತ್ತನಾಗಿ ಬರುತ್ತಿದ್ದು, ಆತನ ಪತ್ನಿ ಪೂರ್ಣಿಮಾ ತರಗತಿಯಲ್ಲಿ ಮಕ್ಕಳಿಗೆ ಥಳಿಸುತ್ತಿದ್ದಾರೆ’ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಸೋಮವಾರ ಶಾಲೆಯ ಎದುರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಎರಡು ವರ್ಷದಿಂದ ಶಿಕ್ಷಕ ಹೀಗೆ ವರ್ತಿಸುತ್ತಿದ್ದು, ಆತನ ಜೊತೆಗೆ ಪತ್ನಿಯೂ ಬರುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.</p>.<p>ಮುಖ್ಯಶಿಕ್ಷಕಿ ಸವಿತಾ ಅವರು ಸೋಮವಾರ ಇಲಾಖೆಯ ತರಬೇತಿಗೆ ಹೋಗಿದ್ದ ವೇಳೆ ಶಿಕ್ಷಕನ ಪತ್ನಿ ತರಗತಿಗೆ ತೆರಳಿ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ ಎಂಬ ವಿಷಯ ತಿಳಿದ ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ಬಂದು ದಂಪತಿಯನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.</p>.<p>ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಬಿಆರ್ಸಿ ಅನಿಲ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಸಿಆರ್ಪಿ ಪುಟ್ಟಸ್ವಾಮಿ, ಪೋಷಕರು, ಗ್ರಾಮಸ್ಥರಿಂದ ಲಿಖಿತ ದೂರು ಪಡೆದರು. ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದರು.</p>.<p>‘ಶಿಕ್ಷಕನ ಪತ್ನಿ ಆಗಾಗ ಶಾಲೆಗೆ ಬಂದು ಪಾಠಗಳ ಬಗ್ಗೆ ಕೇಳಿ, ತೊಂದರೆ ಮಾಡುತ್ತಾರೆ’ ಎಂದು ವಿದ್ಯಾರ್ಥಿನಿಯೊಬ್ಬಳು ದೂರಿದಳು. ‘ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸೇರಿ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನವನ್ನು ನಿತ್ಯ ಮಾಡುತ್ತಿದ್ದಾರೆ. ಆದರೆ ಈ ಶಿಕ್ಷಕ ನಮ್ಮೂರಿನ ಶಾಲೆಗೆ ಕೆಟ್ಟ ಹೆಸರು ತರುತ್ತಿದ್ದಾನೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಗ್ರಾಮದ ಚೇತನ್, ವೆಂಕಟೇಶ್ ದೂರಿದರು ಹೇಳಿದರು.</p>.<div><blockquote>ಗ್ರಾಮಸ್ಥರು ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲಾಗಿದೆ. ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. </blockquote><span class="attribution">ಎಚ್.ಎನ್. ದೀಪಾ ಕ್ಷೇತ್ರ ಶಿಕ್ಷಣಾಧಿಕಾರಿ</span></div>
<p><strong>ಹಿರೀಸಾವೆ:</strong> ‘ಹೋಬಳಿಯ ಸೋರೆಕಾಯಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹರೀಶ್ ಪಾನಮತ್ತನಾಗಿ ಬರುತ್ತಿದ್ದು, ಆತನ ಪತ್ನಿ ಪೂರ್ಣಿಮಾ ತರಗತಿಯಲ್ಲಿ ಮಕ್ಕಳಿಗೆ ಥಳಿಸುತ್ತಿದ್ದಾರೆ’ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಸೋಮವಾರ ಶಾಲೆಯ ಎದುರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಎರಡು ವರ್ಷದಿಂದ ಶಿಕ್ಷಕ ಹೀಗೆ ವರ್ತಿಸುತ್ತಿದ್ದು, ಆತನ ಜೊತೆಗೆ ಪತ್ನಿಯೂ ಬರುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.</p>.<p>ಮುಖ್ಯಶಿಕ್ಷಕಿ ಸವಿತಾ ಅವರು ಸೋಮವಾರ ಇಲಾಖೆಯ ತರಬೇತಿಗೆ ಹೋಗಿದ್ದ ವೇಳೆ ಶಿಕ್ಷಕನ ಪತ್ನಿ ತರಗತಿಗೆ ತೆರಳಿ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ ಎಂಬ ವಿಷಯ ತಿಳಿದ ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ಬಂದು ದಂಪತಿಯನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.</p>.<p>ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಬಿಆರ್ಸಿ ಅನಿಲ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಸಿಆರ್ಪಿ ಪುಟ್ಟಸ್ವಾಮಿ, ಪೋಷಕರು, ಗ್ರಾಮಸ್ಥರಿಂದ ಲಿಖಿತ ದೂರು ಪಡೆದರು. ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದರು.</p>.<p>‘ಶಿಕ್ಷಕನ ಪತ್ನಿ ಆಗಾಗ ಶಾಲೆಗೆ ಬಂದು ಪಾಠಗಳ ಬಗ್ಗೆ ಕೇಳಿ, ತೊಂದರೆ ಮಾಡುತ್ತಾರೆ’ ಎಂದು ವಿದ್ಯಾರ್ಥಿನಿಯೊಬ್ಬಳು ದೂರಿದಳು. ‘ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸೇರಿ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನವನ್ನು ನಿತ್ಯ ಮಾಡುತ್ತಿದ್ದಾರೆ. ಆದರೆ ಈ ಶಿಕ್ಷಕ ನಮ್ಮೂರಿನ ಶಾಲೆಗೆ ಕೆಟ್ಟ ಹೆಸರು ತರುತ್ತಿದ್ದಾನೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಗ್ರಾಮದ ಚೇತನ್, ವೆಂಕಟೇಶ್ ದೂರಿದರು ಹೇಳಿದರು.</p>.<div><blockquote>ಗ್ರಾಮಸ್ಥರು ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲಾಗಿದೆ. ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. </blockquote><span class="attribution">ಎಚ್.ಎನ್. ದೀಪಾ ಕ್ಷೇತ್ರ ಶಿಕ್ಷಣಾಧಿಕಾರಿ</span></div>