ಸಕಲೇಶಪುರ: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಹಾಗೂ ಬಡವರ ಅನ್ನದ ಹೆಸರಿನಲ್ಲಿ ಹಣ ದುರುಪಯೋಗ ಆರೋಪ ಕುರಿತು ‘ಪ್ರಜಾವಾಣಿ’ ‘ಇಂದೀರಾ ಕ್ಯಾಂಟೀನ್: ಬಡವರ ಅನ್ನಕ್ಕೆ ಕನ್ನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಅದರ ಪರಿಣಾಮ, 5 ತಿಂಗಳಿಂದ ಉಳಿಸಿಕೊಂಡಿದ್ದ ವಿದ್ಯುತ್ ಬಿಲ್ ಬಾಕಿಯನ್ನು ಗುತ್ತಿಗೆದಾರ ಸೆಸ್ಕ್ಗೆ ಪಾವತಿ ಮಾಡಿದ್ದಾರೆ. ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.