ರೈತರ ಕಷ್ಟವನ್ನು ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಕೇಳುತ್ತಿಲ್ಲ. ನಮ್ಮ ಮನೆಯಿಂದ ಇಬ್ಬರು ಬಂದು ಒಬ್ಬರು ಸರತಿ ಸಾಲಿನಲ್ಲಿ ಇದ್ದು, ಇನ್ನೊಬ್ಬರು ತಿಂಡಿ, ಊಟ, ನೀರನ್ನು ತಂದು ಕೋಡುತ್ತಾರೆ, ಕ್ಯೂನಲ್ಲಿ ನಿಂತ ಊಟ ಮಾಡುತ್ತಿರುವುದಾಗಿ ಮಂಜುಮ್ಮ ತಿಳಿಸಿದರು. ಮಧ್ಯಾಹ್ನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಭೇಟಿನೀಡಿ, ರೈತರಿಗೆ ಸಮಾಧಾನದಿಂದ ಇರಿ, ಹಚ್ಚುವರಿ ಕೋಬ್ಬರಿ ತೆಗೆದು ಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.