<p><strong>ಹಳೇಬೀಡು: </strong>ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೈಗೊಂಡಿರುವ ಉತ್ಖನನ ಕಾರ್ಯದಲ್ಲಿ ಜೈನ ಯಾತ್ರಾ ಸ್ಥಳವಾಗಿರುವ ಬಸ್ತಿಹಳ್ಳಿ ಹೊಯ್ಸಳರ ಕಾಲದ ಜಿನಮಂದಿರಗಳ ಹಿಂಭಾಗ ವಿಶಿಷ್ಟ ವಿನ್ಯಾಸದ ಹೊಯ್ಸಳ ಶೈಲಿಯ ಸ್ಮಾರಕದ ತಳಪಾಯದ ಕಟ್ಟಡ ಗೋಚರಿಸಿದೆ.</p>.<p>ಹತ್ತು ದಿನದಿಂದ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಮಣ್ಣಿನಿಂದ ಶಿಲ್ಪಗಳನ್ನು ಹೊರತೆಗೆಯುವಾಗ ಕುಸುರಿ ಶಿಲ್ಪ ಕಲೆಗೆ ಹಾನಿಯಾಗಬಾರದು ಎಂದು ಯಂತ್ರ ಬಳಸದೆ ಸಣ್ಣ ಪರಿಕರಗಳಿಂದ ಕೆಲಸ ಮಾಡಲಾಗುತ್ತಿದೆ.</p>.<p>ವಿಶಿಷ್ಟ ಕಲಾಕೃತಿ ಹೊಂದಿರುವ ತಳಪಾಯ ಮಾತ್ರವಲ್ಲದೆ ಜಿನಮೂರ್ತಿಗಳು ಉತ್ಖನನ ಸ್ಥಳದಲ್ಲಿ ಗೋಚರಿಸುತ್ತಿವೆ. ದಾಖಲೀಕರಣ, ಛಾಯಾಗ್ರಹಣ ಮಾಡಿಕೊಂಡು ಎಚ್ಚರಿಕೆಯಿಂದ ಶಿಲ್ಪಗಳನ್ನು ಹೊರತೆಗೆಯಲಾಗುತ್ತಿದೆ. ಪುರಾತತ್ವ ಶಾಸ್ತ್ರಜ್ಞರು ಹಾಗೂ ತಂತ್ರಜ್ಞರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.</p>.<p>ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗದ ಗುಂಡಿಯಲ್ಲಿ ಸುಮಾರು 40 ವರ್ಷದ ಹಿಂದೆಯೇ 18 ಅಡಿ ಎತ್ತರದ ತೀರ್ಥಂಕರ ಮೂರ್ತಿ ಸಿಕ್ಕಿದೆ. ಈಗ ಹಳೇಬೀಡಿನ ಪುರಾತತ್ವ ಮ್ಯೂಸಿಯಂನಲ್ಲಿ ಸಂರಕ್ಷಣೆಗೆ ಒಳಪಟ್ಟಿದೆ. ಮೂರ್ತಿ ಸಿಕ್ಕಿದ ಸ್ಥಳಕ್ಕೆ ಸ್ಥಳೀಯರು ಶ್ರವಣಪ್ಪನ ಗುಂಡಿ ಎಂದು ಕರೆಯುತ್ತಾರೆ.</p>.<p>‘ಉತ್ಖನನ ನಡೆಯುತ್ತಿರುವ ಜಾಗದ ಹಿಂಭಾಗದಲ್ಲಿ ಪರಿಪೂರ್ಣವಾಗಿ ಉತ್ಖನನ ಕೈಗೊಂಡರೆ 5 ರಿಂದ 7 ಜಿನಮಂದಿರಗಳು ದೊರಕುವ ಸಾಧ್ಯತೆ ಇದೆ. ಈ ಸ್ಥಳದಲ್ಲಿ ಜೈನ ಮಠ ಸಹ ಇತ್ತು ಎನ್ನುತ್ತಾರೆ. ಹಾಗಾಗಿ ಪರಿಪೂರ್ಣವಾದ ಉತ್ಖನನ ಆಗಬೇಕಾಗಿದೆ’ ಎನ್ನುತ್ತಾರೆ ಇತಿಹಾಸ ಪ್ರಾಧ್ಯಾಪಕ ವಸಂತ ಕುಮಾರ್.</p>.<p>ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗ ಮೊನಿಭಟಾರ ಎಂಬ ಜೈನ ಮುನಿಯ ನಿಷಿದಿ (ಸಮಾಧಿ)ಇತ್ತು. ಈ ಸ್ಥಳದಲ್ಲಿಯೇ ಪಾಯಣ್ಣ ಎಂಬ ಜೈನ ಶ್ರಾವಕ ಸಲ್ಲೇಖನ ಕೈಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಬಸ್ತಿಹಳ್ಳಿಯ ಸುತ್ತಮುತ್ತ ಜೈನ ಮುನಿಗಳು ವಾಸ್ತವ್ಯ ಹಾಗೂ ವಿಹಾರ ಮಾಡಿದ್ದಾರೆ. ಇಲ್ಲಿ ಜೈನ<br />ಶ್ರಾವಕರು ನೆಲೆಸಿದ್ದರು ಎಂಬುದು ತಿಳಿಯುತ್ತದೆ ಎಂದು ಸಂಶೋಧಕಶ್ರೀವತ್ಸ ಎಸ್. ವಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು: </strong>ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೈಗೊಂಡಿರುವ ಉತ್ಖನನ ಕಾರ್ಯದಲ್ಲಿ ಜೈನ ಯಾತ್ರಾ ಸ್ಥಳವಾಗಿರುವ ಬಸ್ತಿಹಳ್ಳಿ ಹೊಯ್ಸಳರ ಕಾಲದ ಜಿನಮಂದಿರಗಳ ಹಿಂಭಾಗ ವಿಶಿಷ್ಟ ವಿನ್ಯಾಸದ ಹೊಯ್ಸಳ ಶೈಲಿಯ ಸ್ಮಾರಕದ ತಳಪಾಯದ ಕಟ್ಟಡ ಗೋಚರಿಸಿದೆ.</p>.<p>ಹತ್ತು ದಿನದಿಂದ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಮಣ್ಣಿನಿಂದ ಶಿಲ್ಪಗಳನ್ನು ಹೊರತೆಗೆಯುವಾಗ ಕುಸುರಿ ಶಿಲ್ಪ ಕಲೆಗೆ ಹಾನಿಯಾಗಬಾರದು ಎಂದು ಯಂತ್ರ ಬಳಸದೆ ಸಣ್ಣ ಪರಿಕರಗಳಿಂದ ಕೆಲಸ ಮಾಡಲಾಗುತ್ತಿದೆ.</p>.<p>ವಿಶಿಷ್ಟ ಕಲಾಕೃತಿ ಹೊಂದಿರುವ ತಳಪಾಯ ಮಾತ್ರವಲ್ಲದೆ ಜಿನಮೂರ್ತಿಗಳು ಉತ್ಖನನ ಸ್ಥಳದಲ್ಲಿ ಗೋಚರಿಸುತ್ತಿವೆ. ದಾಖಲೀಕರಣ, ಛಾಯಾಗ್ರಹಣ ಮಾಡಿಕೊಂಡು ಎಚ್ಚರಿಕೆಯಿಂದ ಶಿಲ್ಪಗಳನ್ನು ಹೊರತೆಗೆಯಲಾಗುತ್ತಿದೆ. ಪುರಾತತ್ವ ಶಾಸ್ತ್ರಜ್ಞರು ಹಾಗೂ ತಂತ್ರಜ್ಞರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.</p>.<p>ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗದ ಗುಂಡಿಯಲ್ಲಿ ಸುಮಾರು 40 ವರ್ಷದ ಹಿಂದೆಯೇ 18 ಅಡಿ ಎತ್ತರದ ತೀರ್ಥಂಕರ ಮೂರ್ತಿ ಸಿಕ್ಕಿದೆ. ಈಗ ಹಳೇಬೀಡಿನ ಪುರಾತತ್ವ ಮ್ಯೂಸಿಯಂನಲ್ಲಿ ಸಂರಕ್ಷಣೆಗೆ ಒಳಪಟ್ಟಿದೆ. ಮೂರ್ತಿ ಸಿಕ್ಕಿದ ಸ್ಥಳಕ್ಕೆ ಸ್ಥಳೀಯರು ಶ್ರವಣಪ್ಪನ ಗುಂಡಿ ಎಂದು ಕರೆಯುತ್ತಾರೆ.</p>.<p>‘ಉತ್ಖನನ ನಡೆಯುತ್ತಿರುವ ಜಾಗದ ಹಿಂಭಾಗದಲ್ಲಿ ಪರಿಪೂರ್ಣವಾಗಿ ಉತ್ಖನನ ಕೈಗೊಂಡರೆ 5 ರಿಂದ 7 ಜಿನಮಂದಿರಗಳು ದೊರಕುವ ಸಾಧ್ಯತೆ ಇದೆ. ಈ ಸ್ಥಳದಲ್ಲಿ ಜೈನ ಮಠ ಸಹ ಇತ್ತು ಎನ್ನುತ್ತಾರೆ. ಹಾಗಾಗಿ ಪರಿಪೂರ್ಣವಾದ ಉತ್ಖನನ ಆಗಬೇಕಾಗಿದೆ’ ಎನ್ನುತ್ತಾರೆ ಇತಿಹಾಸ ಪ್ರಾಧ್ಯಾಪಕ ವಸಂತ ಕುಮಾರ್.</p>.<p>ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗ ಮೊನಿಭಟಾರ ಎಂಬ ಜೈನ ಮುನಿಯ ನಿಷಿದಿ (ಸಮಾಧಿ)ಇತ್ತು. ಈ ಸ್ಥಳದಲ್ಲಿಯೇ ಪಾಯಣ್ಣ ಎಂಬ ಜೈನ ಶ್ರಾವಕ ಸಲ್ಲೇಖನ ಕೈಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಬಸ್ತಿಹಳ್ಳಿಯ ಸುತ್ತಮುತ್ತ ಜೈನ ಮುನಿಗಳು ವಾಸ್ತವ್ಯ ಹಾಗೂ ವಿಹಾರ ಮಾಡಿದ್ದಾರೆ. ಇಲ್ಲಿ ಜೈನ<br />ಶ್ರಾವಕರು ನೆಲೆಸಿದ್ದರು ಎಂಬುದು ತಿಳಿಯುತ್ತದೆ ಎಂದು ಸಂಶೋಧಕಶ್ರೀವತ್ಸ ಎಸ್. ವಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>