<p><strong>ಹಾಸನ:</strong> ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಹೇರಿದ್ದ ಲಾಕ್ಡೌನ್ ತೆರವಿನ ಬಳಿಕವೂ ಜಿಲ್ಲೆಯಲ್ಲಿಪುಷ್ಪೋದ್ಯಮ ಚೇತರಿಕೆ ಕಂಡಿಲ್ಲ</p>.<p>ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 554.31 ಹೆಕ್ಟೇರ್ ಪ್ರದೇಶದಲ್ಲಿ ಹೂವು<br />ಬೆಳೆಯಲಾಗುತ್ತದೆ. ಅರಕಲಗೂಡು, ಹಾಸನ, ಹೊಳೆನರಸೀಪುರದಲ್ಲಿ ಈ ಉದ್ಯಮವನ್ನು ನಂಬಿಕೊಂಡು<br />ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ.</p>.<p>ಪ್ರಸ್ತುತ ಹೊರಗಿನಿಂದ ಹೂವು ಬರುತ್ತಿಲ್ಲ. ಸ್ಥಳೀಯವಾಗಿ ಬೆಳೆದಿರುವ ಹೂವುಗಳನ್ನು ಕಡಿಮೆ ದರಕ್ಕೆ ಖರೀದಿಸಲಾಗುತ್ತಿದೆ.</p>.<p>ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ ನಂತರ ಹೂವಿನ ವಹಿವಾಟು ಸ್ಥಗಿತಗೊಂಡಿತು. ಈ ಅವಧಿಯಲ್ಲಿಮದುವೆ, ಉತ್ಸವ, ಜಾತ್ರೆ ಇತರೆ ಸಮಾರಂಭಗಳು ನಡೆಯದ ಕಾರಣ ಹೂವಿಗೆ ಬೇಡಿಕೆ ಇರಲಿಲ್ಲ. ಹೂವುಗಳನ್ನು ಕೊಳ್ಳುವವರು ಇಲ್ಲದೇ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದರು. ಹಾಗಾಗಿ ಹೂವುಗಳನ್ನು ಜಮೀನಿನಲ್ಲಿಯೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.</p>.<p>‘ನಿರ್ಬಂಧ ತೆರವುಗೊಂಡು ತಿಂಗಳುಗಳು ಕಳೆದರೂ ಹೂವಿನ ವಹಿವಾಟಿನಲ್ಲಿ ಚೇತರಿಕೆ ಕಂಡಿಲ್ಲ. ಮದುವೆ,<br />ಸಭೆ, ಶುಭ ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರಲು ಅವಕಾಶ ನೀಡಿಲ್ಲ. ಜಾತ್ರೆ, ಉತ್ಸವಗಳು ನಡೆಯುತ್ತಿಲ್ಲ.ಹಬ್ಬಗಳನ್ನು ಸಹ ಸರಳವಾಗಿ ಆಚರಿಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಹೂವಿನ ಬೇಡಿಕೆಯೂಕಡಿಮೆಯಾಗಿದೆ’ ಎನ್ನುತ್ತಾರೆ ಹೂವು ಬೆಳೆಗಾರರು.</p>.<p>ಹಾಸನದಲ್ಲಿ ಬೆಳೆಯುವ ಸೇವಂತಿಗೆ, ಗುಲಾಬಿ ಹಾಗೂ ಅಲಂಕಾರಿಕ ಹೂವುಗಳಿಗೆ ಕೇರಳ, ಮೈಸೂರು,<br />ಮಂಗಳೂರು ಮತ್ತು ಬೆಂಗಳೂರಿನಲ್ಲೂ ಬೇಡಿಕೆ ಹೆಚ್ಚಿದೆ. ಗೊರೂರು, ಚನ್ನರಾಯಪಟ್ಟಣ, ಬೇಲೂರು<br />ತಾಲ್ಲೂಕಿನಲ್ಲಿ ಸೇವಂತಿಗೆ, ಗುಲಾಬಿ ಬೆಳೆಯಲಾಗುತ್ತದೆ. ಸೇವಂತಿಗೆ ಸಸಿಗಳನ್ನು ತಮಿಳುನಾಡಿನ ಫಾರಂ<br />ನಿಂದ ತರಿಸಿ ನಾಟಿ ಮಾಡಲಾಗುತ್ತಿದೆ.</p>.<p>ಲಾಕ್ಡೌನ್ ಸಂದರ್ಭದಲ್ಲಿ 35 ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆ ನಾಶವಾಗಿದ್ದು, ನಷ್ಟಕ್ಕೆ ಒಳಗಾದ 184<br />ಬೆಳೆಗಾರರಿಗೆ ₹ 7.65 ಲಕ್ಷ ಪರಿಹಾರ ಧನ ವಿತರಿಸಲಾಗಿದೆ.</p>.<p>‘ಹಾಸನ ಹೂವುಗಳಿಗೆ ಹೊರ ಜಿಲ್ಲೆ, ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸ್ಥಳೀಯವಾಗಿಯೂ ಬೇಡಿಕೆ<br />ಇದೆ. ಗುಲಾಬಿಗೆ ಬೆಂಗಳೂರು ಮತ್ತು ಅನ್ಯ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚು. ಲಾಕ್ಡೌನ್ ತೆರವು ಬಳಿಕ ಮತ್ತೆ ಹೂವು ವಹಿವಾಟು ಆರಂಭವಾಗಿವೆ. ಕ್ರಮೇಣ ಚೇತರಿಕೆ ಕಾಣಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು.</p>.<p>‘ನಷ್ಟಕ್ಕೆ ಒಳಗಾದ 35 ಹೆಕ್ಟೇರ್ ಪ್ರದೇಶದ ಹೂವು ಬೆಳೆಗಾರರಿಗೆ ₹ 25 ಸಾವಿರ ಪರಿಹಾರ ವಿತರಿಸಲಾಗಿದೆ. ಬೆಳೆ ಸಮೀಕ್ಷೆ ಹೊರತುಪಡಿಸಿ 314.17 ಹೆಕ್ಟೇರ್ ಪ್ರದೇಶದ 1525 ರೈತರು ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಪರಿಹಾರ ಒದಗಿಸಲು ₹ 78.54 ಲಕ್ಷ ಅನುದಾನ ಅವಶ್ಯವಿದೆ’ ಎಂದರು.</p>.<p>‘ಹಾಸನ ಮಾರುಕಟ್ಟೆ ಮತ್ತು ಮೈಸೂರಿನಲ್ಲಿ ಹೂವು ಮಾರಾಟ ಮಾಡಲಾಗುತ್ತಿದೆ. ದಲ್ಲಾಳಿಗಳು ಅಳತೆಯಲ್ಲಿ<br />ಮೋಸ ಮಾಡುತ್ತಾರೆ. ರೈತರಿಂದ ಒಂದು ಮಾರು ಹೂವು ಅನ್ನು ₹3 ರಿಂದ ₹8ರ ವರೆಗೂ ಖರೀದಿಸುತ್ತಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಮಾರು ಹೂವು ₹ 50 ರಿಂದ ₹70 ರ ವರೆಗೆ ಇತ್ತು. ಚೆಂಡು ಹೂವು ಕೆ.ಜಿ ಗೆ ₹25, ಕನಕಾಂಬರ ₹250ಇದೆ. ಶೇಕಡಾ 15 ರಷ್ಟು ವಹಿವಾಟು ನಡೆಯುತ್ತಿದೆ. ಹೊರಗಿನಿಂದ ಹೂ ಬರುತ್ತಿಲ್ಲ. ಸ್ಥಳೀಯರು ಬೆಳೆದ ಹೂವುಗಳಷ್ಟೆ ಬರುತ್ತಿದೆ. ಹೇಳಿಕೊಳ್ಳುವಂತಹ ವ್ಯಾಪಾರವೂ ಇಲ್ಲ’ ಎಂದು ರೈತರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಹೇರಿದ್ದ ಲಾಕ್ಡೌನ್ ತೆರವಿನ ಬಳಿಕವೂ ಜಿಲ್ಲೆಯಲ್ಲಿಪುಷ್ಪೋದ್ಯಮ ಚೇತರಿಕೆ ಕಂಡಿಲ್ಲ</p>.<p>ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 554.31 ಹೆಕ್ಟೇರ್ ಪ್ರದೇಶದಲ್ಲಿ ಹೂವು<br />ಬೆಳೆಯಲಾಗುತ್ತದೆ. ಅರಕಲಗೂಡು, ಹಾಸನ, ಹೊಳೆನರಸೀಪುರದಲ್ಲಿ ಈ ಉದ್ಯಮವನ್ನು ನಂಬಿಕೊಂಡು<br />ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ.</p>.<p>ಪ್ರಸ್ತುತ ಹೊರಗಿನಿಂದ ಹೂವು ಬರುತ್ತಿಲ್ಲ. ಸ್ಥಳೀಯವಾಗಿ ಬೆಳೆದಿರುವ ಹೂವುಗಳನ್ನು ಕಡಿಮೆ ದರಕ್ಕೆ ಖರೀದಿಸಲಾಗುತ್ತಿದೆ.</p>.<p>ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ ನಂತರ ಹೂವಿನ ವಹಿವಾಟು ಸ್ಥಗಿತಗೊಂಡಿತು. ಈ ಅವಧಿಯಲ್ಲಿಮದುವೆ, ಉತ್ಸವ, ಜಾತ್ರೆ ಇತರೆ ಸಮಾರಂಭಗಳು ನಡೆಯದ ಕಾರಣ ಹೂವಿಗೆ ಬೇಡಿಕೆ ಇರಲಿಲ್ಲ. ಹೂವುಗಳನ್ನು ಕೊಳ್ಳುವವರು ಇಲ್ಲದೇ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದರು. ಹಾಗಾಗಿ ಹೂವುಗಳನ್ನು ಜಮೀನಿನಲ್ಲಿಯೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.</p>.<p>‘ನಿರ್ಬಂಧ ತೆರವುಗೊಂಡು ತಿಂಗಳುಗಳು ಕಳೆದರೂ ಹೂವಿನ ವಹಿವಾಟಿನಲ್ಲಿ ಚೇತರಿಕೆ ಕಂಡಿಲ್ಲ. ಮದುವೆ,<br />ಸಭೆ, ಶುಭ ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರಲು ಅವಕಾಶ ನೀಡಿಲ್ಲ. ಜಾತ್ರೆ, ಉತ್ಸವಗಳು ನಡೆಯುತ್ತಿಲ್ಲ.ಹಬ್ಬಗಳನ್ನು ಸಹ ಸರಳವಾಗಿ ಆಚರಿಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಹೂವಿನ ಬೇಡಿಕೆಯೂಕಡಿಮೆಯಾಗಿದೆ’ ಎನ್ನುತ್ತಾರೆ ಹೂವು ಬೆಳೆಗಾರರು.</p>.<p>ಹಾಸನದಲ್ಲಿ ಬೆಳೆಯುವ ಸೇವಂತಿಗೆ, ಗುಲಾಬಿ ಹಾಗೂ ಅಲಂಕಾರಿಕ ಹೂವುಗಳಿಗೆ ಕೇರಳ, ಮೈಸೂರು,<br />ಮಂಗಳೂರು ಮತ್ತು ಬೆಂಗಳೂರಿನಲ್ಲೂ ಬೇಡಿಕೆ ಹೆಚ್ಚಿದೆ. ಗೊರೂರು, ಚನ್ನರಾಯಪಟ್ಟಣ, ಬೇಲೂರು<br />ತಾಲ್ಲೂಕಿನಲ್ಲಿ ಸೇವಂತಿಗೆ, ಗುಲಾಬಿ ಬೆಳೆಯಲಾಗುತ್ತದೆ. ಸೇವಂತಿಗೆ ಸಸಿಗಳನ್ನು ತಮಿಳುನಾಡಿನ ಫಾರಂ<br />ನಿಂದ ತರಿಸಿ ನಾಟಿ ಮಾಡಲಾಗುತ್ತಿದೆ.</p>.<p>ಲಾಕ್ಡೌನ್ ಸಂದರ್ಭದಲ್ಲಿ 35 ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆ ನಾಶವಾಗಿದ್ದು, ನಷ್ಟಕ್ಕೆ ಒಳಗಾದ 184<br />ಬೆಳೆಗಾರರಿಗೆ ₹ 7.65 ಲಕ್ಷ ಪರಿಹಾರ ಧನ ವಿತರಿಸಲಾಗಿದೆ.</p>.<p>‘ಹಾಸನ ಹೂವುಗಳಿಗೆ ಹೊರ ಜಿಲ್ಲೆ, ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸ್ಥಳೀಯವಾಗಿಯೂ ಬೇಡಿಕೆ<br />ಇದೆ. ಗುಲಾಬಿಗೆ ಬೆಂಗಳೂರು ಮತ್ತು ಅನ್ಯ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚು. ಲಾಕ್ಡೌನ್ ತೆರವು ಬಳಿಕ ಮತ್ತೆ ಹೂವು ವಹಿವಾಟು ಆರಂಭವಾಗಿವೆ. ಕ್ರಮೇಣ ಚೇತರಿಕೆ ಕಾಣಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು.</p>.<p>‘ನಷ್ಟಕ್ಕೆ ಒಳಗಾದ 35 ಹೆಕ್ಟೇರ್ ಪ್ರದೇಶದ ಹೂವು ಬೆಳೆಗಾರರಿಗೆ ₹ 25 ಸಾವಿರ ಪರಿಹಾರ ವಿತರಿಸಲಾಗಿದೆ. ಬೆಳೆ ಸಮೀಕ್ಷೆ ಹೊರತುಪಡಿಸಿ 314.17 ಹೆಕ್ಟೇರ್ ಪ್ರದೇಶದ 1525 ರೈತರು ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಪರಿಹಾರ ಒದಗಿಸಲು ₹ 78.54 ಲಕ್ಷ ಅನುದಾನ ಅವಶ್ಯವಿದೆ’ ಎಂದರು.</p>.<p>‘ಹಾಸನ ಮಾರುಕಟ್ಟೆ ಮತ್ತು ಮೈಸೂರಿನಲ್ಲಿ ಹೂವು ಮಾರಾಟ ಮಾಡಲಾಗುತ್ತಿದೆ. ದಲ್ಲಾಳಿಗಳು ಅಳತೆಯಲ್ಲಿ<br />ಮೋಸ ಮಾಡುತ್ತಾರೆ. ರೈತರಿಂದ ಒಂದು ಮಾರು ಹೂವು ಅನ್ನು ₹3 ರಿಂದ ₹8ರ ವರೆಗೂ ಖರೀದಿಸುತ್ತಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಮಾರು ಹೂವು ₹ 50 ರಿಂದ ₹70 ರ ವರೆಗೆ ಇತ್ತು. ಚೆಂಡು ಹೂವು ಕೆ.ಜಿ ಗೆ ₹25, ಕನಕಾಂಬರ ₹250ಇದೆ. ಶೇಕಡಾ 15 ರಷ್ಟು ವಹಿವಾಟು ನಡೆಯುತ್ತಿದೆ. ಹೊರಗಿನಿಂದ ಹೂ ಬರುತ್ತಿಲ್ಲ. ಸ್ಥಳೀಯರು ಬೆಳೆದ ಹೂವುಗಳಷ್ಟೆ ಬರುತ್ತಿದೆ. ಹೇಳಿಕೊಳ್ಳುವಂತಹ ವ್ಯಾಪಾರವೂ ಇಲ್ಲ’ ಎಂದು ರೈತರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>