ತಾಲ್ಲೂಕಿನ ಉದೇವಾರ ಗ್ರಾಮದ ಮನೆಯೊಂದರ ಮೇಲೆ ಮಂಗಳವಾರ ರಾತ್ರಿ ದಾಳಿ ಮಾಡಿ, ಬಾಗಿಲು ಜಖಂಗೊಳಿಸಿದ್ದ ಈ ಆನೆ, ಇದೇ ಗ್ರಾಮದ ಕಾಫಿ ತೋಟದಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಯಿತು. ನಾಗರಹೊಳೆಯ ಮತ್ತಿಗೋಡು ಹಾಗೂ ದುಬಾರೆ ಆನೆ ಧಾಮಗಳಿಂದ ಕಾರ್ಯಾಚರಣೆಗೆ ಬಂದಿದ್ದ ಮಹೇಂದ್ರ, ಕರ್ನಾಟಕ ಭೀಮ, ಮಹಾರಾಷ್ಟ್ರ ಭೀಮ, ಸುಗ್ರೀವ, ಧನಂಜಯ್ಯ, ಹರ್ಷ ಆನೆಗಳೊಂದಿಗೆ ತೆರಳಿದ ಅರಣ್ಯ ಇಲಾಖೆಯ ವೆಂಕಟೇಶ್, ಬಂದೂಕಿನಿಂದ ಅರವಳಿಕೆ ಚುಚುಮದ್ದು ಹಾರಿಸುವಲ್ಲಿ ಯಶಸ್ವಿಯಾದರು.