<p><strong>ರಾಮನಾಥಪುರ (ಕೊಣನೂರು): </strong>ಹೋಬಳಿಯ ಕಾಳೇನಹಳ್ಳಿಯಲ್ಲಿ ಗೌರಮ್ಮನ ವಿಸರ್ಜನೆಯನ್ನು ತೆಪ್ಪೋತ್ಸವದೊಂದಿಗೆ ನೆರವೇರಿಸಲಾಯಿತು.</p>.<p>ಪ್ರತಿವರ್ಷ ಸ್ವರ್ಣ ಗೌರಿ ವ್ರತದ ದಿನದಿಂದು ಸಮೀಪದ ಬಸವನಹಳ್ಳಿಯ ಕಾವೇರಿನದಿ ದಂಡೆಯಲ್ಲಿರುವ ಈಶ್ವರ ದೇವಾಲಯದಲ್ಲಿ ತಯಾರಿಸಿದ ಗೌರಮ್ಮನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕಾಳೇನಹಳ್ಳಿಗೆ ತಂದು ಪ್ರತಿಷ್ಠಾಪಿಸಿ ತಿಂಗಳ ಕಾಲ ಪೂಜಿಸಿ ಮಹಾಲಯ ಅಮವಾಸ್ಯೆಯಂದು ವಿಸರ್ಜಿಸಲಾಗುತ್ತಿತ್ತು.</p>.<p>ಈ ವರ್ಷ ಕೊರೊನಾ ಲಾಕ್ಡೌನ್ ಕಾರಣದಿಂದ ಗೌರಿಹಬ್ಬ ಕಳೆದು 13 ದಿನಗಳ ನಂತರ ಕಾಳೇನಹಳ್ಳಿಯ ಗೌರಮ್ಮ ದೇವಿಯ ದೇವಾಲಯದಲ್ಲಿ ಮೂರ್ತಿ ತಯಾರಿಸಿ, ಪ್ರತಿಷ್ಠಾಪಿಸಿ ಗುರುವಾರ ವಿಸರ್ಜಿಸಲಾಯಿತು.</p>.<p>ಗುರುವಾರ ಬೆಳಿಗ್ಗೆ ಅಡ್ಡಪಲ್ಲಕ್ಕಿಯ ಮೇಲೆ ಗ್ರಾಮ ದೇವತೆ ದಿಡ್ಡಮ್ಮ ದೇವಿಯ ಉತ್ಸವ ಮೂರ್ತಿ ಮತ್ತು ಗೌರಮ್ಮ ದೇವಿಯರ ಮೂರ್ತಿಯ ಉತ್ಸವ ನಡೆಸಿ ಗ್ರಾಮದ ದೊಡ್ಡಕೆರೆಯಲ್ಲಿ ತೆಪ್ಪೋತ್ಸವವನ್ನು ಮಾಡಿ ವಿಸರ್ಜಿಸಲಾಯಿತು. ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಾಥಪುರ (ಕೊಣನೂರು): </strong>ಹೋಬಳಿಯ ಕಾಳೇನಹಳ್ಳಿಯಲ್ಲಿ ಗೌರಮ್ಮನ ವಿಸರ್ಜನೆಯನ್ನು ತೆಪ್ಪೋತ್ಸವದೊಂದಿಗೆ ನೆರವೇರಿಸಲಾಯಿತು.</p>.<p>ಪ್ರತಿವರ್ಷ ಸ್ವರ್ಣ ಗೌರಿ ವ್ರತದ ದಿನದಿಂದು ಸಮೀಪದ ಬಸವನಹಳ್ಳಿಯ ಕಾವೇರಿನದಿ ದಂಡೆಯಲ್ಲಿರುವ ಈಶ್ವರ ದೇವಾಲಯದಲ್ಲಿ ತಯಾರಿಸಿದ ಗೌರಮ್ಮನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕಾಳೇನಹಳ್ಳಿಗೆ ತಂದು ಪ್ರತಿಷ್ಠಾಪಿಸಿ ತಿಂಗಳ ಕಾಲ ಪೂಜಿಸಿ ಮಹಾಲಯ ಅಮವಾಸ್ಯೆಯಂದು ವಿಸರ್ಜಿಸಲಾಗುತ್ತಿತ್ತು.</p>.<p>ಈ ವರ್ಷ ಕೊರೊನಾ ಲಾಕ್ಡೌನ್ ಕಾರಣದಿಂದ ಗೌರಿಹಬ್ಬ ಕಳೆದು 13 ದಿನಗಳ ನಂತರ ಕಾಳೇನಹಳ್ಳಿಯ ಗೌರಮ್ಮ ದೇವಿಯ ದೇವಾಲಯದಲ್ಲಿ ಮೂರ್ತಿ ತಯಾರಿಸಿ, ಪ್ರತಿಷ್ಠಾಪಿಸಿ ಗುರುವಾರ ವಿಸರ್ಜಿಸಲಾಯಿತು.</p>.<p>ಗುರುವಾರ ಬೆಳಿಗ್ಗೆ ಅಡ್ಡಪಲ್ಲಕ್ಕಿಯ ಮೇಲೆ ಗ್ರಾಮ ದೇವತೆ ದಿಡ್ಡಮ್ಮ ದೇವಿಯ ಉತ್ಸವ ಮೂರ್ತಿ ಮತ್ತು ಗೌರಮ್ಮ ದೇವಿಯರ ಮೂರ್ತಿಯ ಉತ್ಸವ ನಡೆಸಿ ಗ್ರಾಮದ ದೊಡ್ಡಕೆರೆಯಲ್ಲಿ ತೆಪ್ಪೋತ್ಸವವನ್ನು ಮಾಡಿ ವಿಸರ್ಜಿಸಲಾಯಿತು. ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>