ಶೌಚಾಲಯ ನಿರ್ಮಾಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬರುವ ಸಾರ್ವಜನಿಕರಿಗಾಗಿ ಮಂದಿನ ದಿನಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು. ಹರೀಶ್ ಪಿಎಸಿಸಿ ಸಿಇಒ ಹಿರೀಸಾವೆ ಒಂದೇ ಸೂರಿನಡಿ ಕಂದಾಯ ಇಲಾಖೆ ವೇತನಗಳ ಮಂಜೂರಾತಿ ದೃಢೀಕರಣ ವಿತರಣೆ ಜಮೀನು ದಾಖಲೆಯ ಕೆಲಸ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕಂದಾಯ ಇಲಾಖೆ ಪ್ರಮುಖ ಪಾತ್ರವಹಿಸಬೇಕು. ಕಂದಾಯ ನೌಕರರು ಒಂದೇ ಸೂರಿನಡಿ ಸಿಗುವಂತಾಗಬೇಕು.ಶಿವಶಂಕರಪ್ಪ ರೈತ ರಾಜಗೆರೆ ಹಳೇಬೀಡು
ನೀರಿಗೆ ತೊಂದರೆ ಆಗದಂತೆ ಕ್ರಮ ನಾನು ಬಂದ ಕೂಡಲೇ ಕಚೇರಿಯ ಟ್ಯಾಂಕ್ಗಳಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ ಲೋಕೇಶ್ ಪ್ರಭಾರ ಗ್ರೇಡ್ 2 ತಹಶೀಲ್ದಾರ್ ಹೊಳೆನರಸೀಪುರ ಮೇಲಧಿಕಾರಿಗಳಿಗೆ ಮಾಹಿತಿ ನಮ್ಮ ಸರ್ವೇಯರ್ಗಳು ಕುಳಿತುಕೊಳ್ಳಲು ಅಗತ್ಯಕ್ಕೆ ತಕ್ಕಷ್ಟು ಸ್ಥಳಾವಕಾಶ ಹಾಗೂ ಪೀಠೋಕರಣಗಳ ಅವಶ್ಯಕತೆ ಇದೆ ಎಂಬುದನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ.ಪರಶಿವನಾಯಕ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹೊಳೆನರಸೀಪುರ
ಒಂದೇ ಶೌಚಾಲಯ ನಮಗಿರುವ ಸ್ಥಳಾವಕಾಶದಲ್ಲಿ ಒಂದು ಶೌಚಾಲಯದ ವ್ಯವಸ್ಥೆ ಕಲ್ಪಿಸಿದ್ದೇವೆ. ಅಗತ್ಯ ಇದ್ದಾಗ ತಾಲ್ಲೂಕು ಕಚೇರಿಯ ಶೌಚಾಲಯ ಬಳಸುತ್ತಾರೆ. ದಿವಾಕರ್ ನೋಂದಣಾಧಿಕಾರಿ ಬಳಕೆಗೆ ಅವಕಾಶ ಬೇಕು ಮಿನಿ ವಿಧಾನಸೌಧ ಕಾಂಪೌಂಡ್ಗೆ ಅಂಟಿಕೊಂಡಂತೆ ಸಾರ್ವಜನಿಕ ಶೌಚಾಲಯವಿದೆ. ಹಣ ಪಾವತಿಸಿ ಬಳಸಲು ಅವಕಾಶವಿದೆ. ವಿಧಾನಸೌಧ ಕಾಂಪೌಂಡ್ ಕಡೆಯಿಂದಲೂ ಗೇಟ್ ಅಳವಡಿಸಿದರೆ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಬಳಸಲು ಅವಕಾಶವಾಗುತ್ತದೆ. ನಾರಾಯಣ ಆಲೂರು ನಾಗರಿಕ ಕಾಲಮಿತಿಯಲ್ಲಿ ಕಡತ ವಿಲೇವಾರಿ ತಾಲ್ಲೂಕು ಕಚೇರಿಯಲ್ಲಿ ಇ-ಕಚೇರಿ ಆರಂಭಿಸಲಾಗಿದ್ದು ಕಡತಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಎಲ್ಲಾ ಕೇಸ್ ವರ್ಕರ್ಗಳಿಗೆ ಕಂಪ್ಯೂಟರ್ ನೀಡಲಾಗಿದೆ.ಬಿ.ಎಂ. ಗೋವಿಂದರಾಜು ಚನ್ನರಾಯಪಟ್ಟಣ ತಹಶೀಲ್ದಾರ್
ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ತಾಲ್ಲೂಕು ಕಚೇರಿಯಲ್ಲಿ ರ್ಯಾಂಪ್ ಹಾಗೂ ಲಿಫ್ಟ್ ಸೌಲಭ್ಯ ಇದೆ. ಕುಡಿಯುವ ನೀರಿನ ಸೌಲಭ್ಯವಿದ್ದು ಅದನ್ನು ದುರಸ್ತಿ ಮಾಡಬೇಕಿದೆ. ಅಂಗವಿಕಲರಿಗೆ ದಾಖಲೆಗಳನ್ನು ಪಡೆಯಲು ಪ್ರತ್ಯೇಕ ಸರದಿ ವ್ಯವಸ್ಥೆ ಒದಗಿಸಬೇಕಿದೆ.ಸಿ.ಜಿ. ಸೋಮಶೇಖರ್ ಚನ್ನರಾಯಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.