ಅರ್ಹರಿಗೆ ಭೂಮಿ: ಮತ್ತೊಂದು ಸಮಿತಿ
ಈಗಾಗಲೇ ಅನರ್ಹರಿಗೆ ನೀಡಿದ್ದ ಭೂ ಮಂಜೂರಾತಿ ರದ್ದುಪಡಿಸಲಾಗಿದ್ದು, ಈ ಭೂಮಿಯನ್ನು ನೈಜ ಸಂತ್ರಸ್ತರಿಗೆ ಹಂಚಿಕೆ ಮಾಡಬೇಕಾಗಿದೆ.
ಆದರೆ, ಸರ್ಕಾರ ಅದಕ್ಕಾಗಿ ಮತ್ತೊಂದು ಸಮಿತಿಯನ್ನು ರಚಿಸಿ 2025ರ ಏ.15ರಂದು ಆದೇಶ ಹೊರಡಿಸಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ರಚಿಸಲಾಗಿದ್ದು, ಸಮಿತಿಯು ತನಿಖೆ ನಡೆಸಿ, ನೈಜತೆ ದೃಢೀಕರಿಸಿದ ನಂತರವೇ ಅರ್ಹರಿಗೆ ಭೂಮಿ ಸಿಗಲಿದೆ. ಅಕ್ರಮ ಭೂಮಂಜೂರಾತಿ ಪತ್ತೆಗಾಗಿ ಸಮಿತಿ ರಚಿಸಲಾಗಿತ್ತು. ಇದೀಗ ನೈಜ ಸಂತ್ರಸ್ತರ ಪತ್ತೆಗೆ ಮತ್ತೊಂದು ಸಮಿತಿ ಮಾಡಲಾಗಿದೆ. ಹೀಗಾದರೆ ನಮಗೆ ಭೂಮಿ ಸಿಗುವುದಾದರೂ ಯಾವಾಗ ಎಂಬುದು ಸಂತ್ರಸ್ತರ ಅಳಲು.