<p>ಬೇಲೂರು: ಪಟ್ಟಣ ಸಮೀಪದ ಬಂಟೇನಹಳ್ಳಿ ಎಚ್.ಪಿ. ಗ್ಯಾಸ್ ಏಜೆನ್ಸಿ ಬಳಿ ಇ-ಕೆ ವೈಸಿ ಮಾಡಿಸಲು ಗ್ರಾಹಕರು ಗುರುವಾರ ಮುಗಿಬಿದ್ದಿದ್ದರು.</p>.<p>ಗ್ಯಾಸ್ ಕಂಪನಿಯಿಂದ ವಿವಿಧ ಸೌಲಭ್ಯ ಪಡೆಯಲು ಡಿ.31 ರೊಳಗೆ ಇ-ಕೆವೈಸಿ ಮಾಡಿಸಬೇಕೆಂಬ ವದಂತಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದರಿಂದ, ಸಾವಿರಾರು ಗ್ರಾಹಕರು ಬೆಳಗಿನಿಂದಲೇ ಆಧಾರ್ ಕಾರ್ಡ್, ಗ್ಯಾಸ್ ಪಾಸ್ ಪುಸ್ತಕ ಹಿಡಿದು ಶ್ರೀಚನ್ನಕೇಶವ ಗ್ಯಾಸ್ ಏಜೆನ್ಸಿ ಕಚೇರಿ ಮುಂದೆ ಜಮಾಯಿಸಿದರು. ದಿನವೊಂದಕ್ಕೆ 125 ಜನ ಗ್ರಾಹಕರಿಗೆ ಮಾತ್ರ ಇ-ಕೆ ವೈಸಿ ಮಾಡಲು ಸಾಧ್ಯವೆಂದು ಏಜೆನ್ಸಿಯವರು ಎಷ್ಟೇ ಹೆಳಿದರೂ ಜನರು ಕೆಳುವ ಸ್ಥಿತಿಯಲ್ಲಿರಲಿಲ್ಲ.</p>.<p>ಗ್ರಾಹಕ ವಿಶ್ವನಾಥ್ ಮಾತನಾಡಿ, ಆಧಾರ್ ಲಿಂಕ್ ಮಾಡಿಸಬೇಕೆಂದು ಅಕ್ಕ ಪಕ್ಕದವರಿಂದ ಕೇಳಿ ತಿಳಿದಿಕೊಂಡೆ. ಲಿಂಕ್ ಮಾಡಿಸದಿದ್ದರೆ ಸರ್ಕಾರದಿಂದ ದೊರಕುವ ಸೌಲಭ್ಯ ನಿಂತು ಹೋಗಬಹುದೆಂಬ ಭಯದಿಂದ ಬೆಳಗ್ಗೆಯೇ ಬಂದು ನೂರಾರು ಜನರ ಜತೆ ಸರತಿ ಸಾಲಿನಲ್ಲಿ ನಿಂತಿದ್ದೇನೆ ಎಂದರು.</p>.<p>ಶ್ರೀಚನ್ನಕೇಶವ ಗ್ಯಾಸ್ ಎಜೆನ್ಸಿ ಮಾಲೀಕರಾದ ಲತಾ ಮಂಜೇಶ್ವರಿ ಮಾತನಾಡಿ, ಎಚ್ಪಿ ಗ್ಯಾಸ್ ಕಂಪನಿಯ ಕೇಂದ್ರ ಕಚೇರಿಯಿಂದ ಇ-ಕೆವೈಸಿ ಮಾಡಿಸುವಂತೆ ತಿಂಗಳ ಹಿಂದೆಯೆ ಸೂಚನೆ ಬಂದಿದೆ. ಆದರೆ ಕೊನೆಯ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ಗೊಂದಲಕ್ಕೊಳಗಾಗದೆ ಸಮಧಾನದಿಂದ ಆಧಾರ್ ಕಾರ್ಡ್ ಹಾಗೂ ಗ್ಯಾಸ್ ಪುಸ್ತಕದ ಜತೆ ಕಚೇರಿಗೆ ಆಗಮಿಸಿ ಇ–ಕೆವೈಸಿ ಮಾಡಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.</p>.<p>ಶ್ರೀಚನ್ನಕೆಶವ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ಕೇಂದ್ರದ ಉಜ್ವಲ ಉಚಿತ ಗ್ಯಾಸ್ ನೋಂದಣಿಗೆ 2024ರ ಫೆಬ್ರುವರಿ ಕೊನೆಯ ದಿನವಾಗಿದೆ. ಅದಕ್ಕೆ ಬೇಕಾಗುವ ದಾಖಲೆಗಳನ್ನು ಕಚೇರಿಯ ಮುಂಭಾಗ ಪ್ರಕಟಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇಲೂರು: ಪಟ್ಟಣ ಸಮೀಪದ ಬಂಟೇನಹಳ್ಳಿ ಎಚ್.ಪಿ. ಗ್ಯಾಸ್ ಏಜೆನ್ಸಿ ಬಳಿ ಇ-ಕೆ ವೈಸಿ ಮಾಡಿಸಲು ಗ್ರಾಹಕರು ಗುರುವಾರ ಮುಗಿಬಿದ್ದಿದ್ದರು.</p>.<p>ಗ್ಯಾಸ್ ಕಂಪನಿಯಿಂದ ವಿವಿಧ ಸೌಲಭ್ಯ ಪಡೆಯಲು ಡಿ.31 ರೊಳಗೆ ಇ-ಕೆವೈಸಿ ಮಾಡಿಸಬೇಕೆಂಬ ವದಂತಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದರಿಂದ, ಸಾವಿರಾರು ಗ್ರಾಹಕರು ಬೆಳಗಿನಿಂದಲೇ ಆಧಾರ್ ಕಾರ್ಡ್, ಗ್ಯಾಸ್ ಪಾಸ್ ಪುಸ್ತಕ ಹಿಡಿದು ಶ್ರೀಚನ್ನಕೇಶವ ಗ್ಯಾಸ್ ಏಜೆನ್ಸಿ ಕಚೇರಿ ಮುಂದೆ ಜಮಾಯಿಸಿದರು. ದಿನವೊಂದಕ್ಕೆ 125 ಜನ ಗ್ರಾಹಕರಿಗೆ ಮಾತ್ರ ಇ-ಕೆ ವೈಸಿ ಮಾಡಲು ಸಾಧ್ಯವೆಂದು ಏಜೆನ್ಸಿಯವರು ಎಷ್ಟೇ ಹೆಳಿದರೂ ಜನರು ಕೆಳುವ ಸ್ಥಿತಿಯಲ್ಲಿರಲಿಲ್ಲ.</p>.<p>ಗ್ರಾಹಕ ವಿಶ್ವನಾಥ್ ಮಾತನಾಡಿ, ಆಧಾರ್ ಲಿಂಕ್ ಮಾಡಿಸಬೇಕೆಂದು ಅಕ್ಕ ಪಕ್ಕದವರಿಂದ ಕೇಳಿ ತಿಳಿದಿಕೊಂಡೆ. ಲಿಂಕ್ ಮಾಡಿಸದಿದ್ದರೆ ಸರ್ಕಾರದಿಂದ ದೊರಕುವ ಸೌಲಭ್ಯ ನಿಂತು ಹೋಗಬಹುದೆಂಬ ಭಯದಿಂದ ಬೆಳಗ್ಗೆಯೇ ಬಂದು ನೂರಾರು ಜನರ ಜತೆ ಸರತಿ ಸಾಲಿನಲ್ಲಿ ನಿಂತಿದ್ದೇನೆ ಎಂದರು.</p>.<p>ಶ್ರೀಚನ್ನಕೇಶವ ಗ್ಯಾಸ್ ಎಜೆನ್ಸಿ ಮಾಲೀಕರಾದ ಲತಾ ಮಂಜೇಶ್ವರಿ ಮಾತನಾಡಿ, ಎಚ್ಪಿ ಗ್ಯಾಸ್ ಕಂಪನಿಯ ಕೇಂದ್ರ ಕಚೇರಿಯಿಂದ ಇ-ಕೆವೈಸಿ ಮಾಡಿಸುವಂತೆ ತಿಂಗಳ ಹಿಂದೆಯೆ ಸೂಚನೆ ಬಂದಿದೆ. ಆದರೆ ಕೊನೆಯ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ಗೊಂದಲಕ್ಕೊಳಗಾಗದೆ ಸಮಧಾನದಿಂದ ಆಧಾರ್ ಕಾರ್ಡ್ ಹಾಗೂ ಗ್ಯಾಸ್ ಪುಸ್ತಕದ ಜತೆ ಕಚೇರಿಗೆ ಆಗಮಿಸಿ ಇ–ಕೆವೈಸಿ ಮಾಡಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.</p>.<p>ಶ್ರೀಚನ್ನಕೆಶವ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ಕೇಂದ್ರದ ಉಜ್ವಲ ಉಚಿತ ಗ್ಯಾಸ್ ನೋಂದಣಿಗೆ 2024ರ ಫೆಬ್ರುವರಿ ಕೊನೆಯ ದಿನವಾಗಿದೆ. ಅದಕ್ಕೆ ಬೇಕಾಗುವ ದಾಖಲೆಗಳನ್ನು ಕಚೇರಿಯ ಮುಂಭಾಗ ಪ್ರಕಟಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>