‘ಸರ್ಕಾರ ಹಾಗೂ ಸಂಸ್ಥೆಯ ಎಲ್ಲರ ಸಹಕಾರದಿಂದ ನಾನು ನಿಗದಿಪಡಿಸಿದ್ದ ಎಲ್ಲ ಗುರಿಗಳು ಈಗ ಈಡೇರಿದಂತಾಗಿದ್ದು, ಸಂಸ್ಥೆಗೆ ಎರಡು ಬಾರಿ ಕಾಯಕಲ್ಪ ಪ್ರಥಮ ಪ್ರಶಸ್ತಿ, 2 ಬಾರಿ ಬೆಸ್ಟ್ ಎನ್ಎಸ್ಎಸ್ ಪ್ರಶಸ್ತಿ, ರಾಷ್ಟ್ರೀಯ ಮಾನ್ಯತೆಗಳಾದ ಎನ್ಎಬಿಎಚ್, ಎನ್ಎಬಿಎಲ್, ಎನ್ಎಕ್ಯುಎಸ್, ಲಕ್ಷ್ಯ, ಮುಸ್ಕಾನ್ ಮುಂತಾದ ಮಾನ್ಯತೆ ಗಳಿಸಲು ಸಫಲವಾಗಿದ್ದು, ಸಂಸ್ಥೆಯು ಪ್ರಸ್ತುತ ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಗುರಿ ಸಾಧಿಸಿದ ಹೆಮ್ಮೆ ಹಾಗೂ ಸಂಪೂರ್ಣ ತೃಪ್ತಿಯೊಂದಿಗೆ ನಿರ್ದೇಶಕರ ಹುದ್ದೆಗೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಅಂಗೀಕರಿಸಿ ಆದಷ್ಟು ಶೀಘ್ರ ನನ್ನನ್ನು ಹುದ್ದೆಯಿಂದ ಬಿಡುಗಡೆ ಮಾಡಬೇಕು’ ಎಂದು ಕೋರಿದ್ದಾರೆ.