<p><strong>ಹಾಸನ:</strong> ‘ಹಿಂದೂ ಸಮುದಾಯ ಸಂಘಟಿತವಾದರೆ ದೇಶ ತನ್ನೆಲ್ಲಾ ಸಮಸ್ಯೆಗಳಿಂದ ಹೊರಬರುತ್ತದೆ’ ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.</p>.<p>ನಗರದ ಹಾಸನಾಂಬಾ ಕಲಾಕ್ಷೇತ್ರದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಮೈಸೂರು ವಿಭಾಗದ ಪ್ರಾಥಮಿಕ ಶಿಕ್ಷಾ ವರ್ಗ-2021ರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿ ಸಂಘಟನೆ, ಶಿಸ್ತು ಹಾಗೂ ಯೋಜನೆ ಕೊರತೆ ಇರುವುದರಿಂದ ದೇಶದಲ್ಲೇ ಬಹುಸಂಖ್ಯಾತರಾದರೂ ಹಿಂದೂ ಧರ್ಮ ದುರ್ಬಲವಾಗಿದೆ’ ಎಂದರು.</p>.<p>‘ಜಾತಿ ಪದ್ಧತಿ, ಭಾಷೆಯ ವಿಷಮತೆ, ಉತ್ತರ ದಕ್ಷಿಣ ಎಂಬ ಲೋಪಗಳು, ಆರ್ಯ ದ್ರಾವಿಡ ಎಂಬ ವಿಚಾರದ ಚರ್ಚೆಗಳು ಹಿಂದೂ ಧರ್ಮವನ್ನು ಛಿದ್ರ ಮಾಡಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬಂದಾಗ ಮಾತ್ರ ಅತ್ಯಂತ ಶಕ್ತಿಶಾಲಿ ಸಮಾಜವಾಗಲು ಸಾಧ್ಯ’ ಎಂದು ಹೇಳಿದರು.</p>.<p>ಕಾರ್ಯಕ್ರಮಕ್ಕೆ ಮೊದಲು ಹಾಸನಾಂಬಾ ದೇವಸ್ಥಾನ ಬಳಿಯಿಂದ ಗಣವೇಷಧಾರಿಗಳು ಮೆರವಣಿಗೆ ಹೊರಟು ಹೊಸಲೈನ್ ರಸ್ತೆ, ಗಾಂಧಿ ಬಜಾರ್, ಸುಭಾಷ್ ವೃತ್ತ, ಎನ್.ಆರ್ ವೃತ್ತ. ಮಹಾವೀರ ವೃತ್ತ, ಅಗ್ರಹಾರ ರಸ್ತೆ, ಅರಳಪೇಟೆ ರಸ್ತೆ, ಸಹ್ಯಾದ್ರಿ ರಸ್ತೆ ಮೂಲಕ ಆಕರ್ಷಕ ಪಥ ಸಂಚಲನ ನಡೆಸಿದರು.</p>.<p>ಕಾರ್ಯಕ್ರಮದಲ್ಲಿ ಸಂಘದ ಶಿಬಿರಾಧಿಕಾರಿ ಲಕ್ಷ್ಮೀಕಾಂತ್, ಹಿರಿಯ ಪ್ರಚಾರಕ ದಾ.ಮ. ರವೀಂದ್ರ, ಪ್ರಾಂತ ಕಾರ್ಯಕಾರಣಿ ಸದಸ್ಯ ಲಕ್ಷ್ಮೀನಾರಾಯಣ ಶಾಸ್ತ್ರಿ, ಮೈಸೂರು ವಿಭಾಗದ ಕಾರ್ಯವಾಹ ನಾರ್ವೇ ವಿಜಯಕುಮಾರ್, ಸಹ ಕಾರ್ಯವಾಹ ಮಹೇಶ್, ಪ್ರಚಾರಕ ಅಕ್ಷಯ್, ಮೋಹನ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ‘ಹಿಂದೂ ಸಮುದಾಯ ಸಂಘಟಿತವಾದರೆ ದೇಶ ತನ್ನೆಲ್ಲಾ ಸಮಸ್ಯೆಗಳಿಂದ ಹೊರಬರುತ್ತದೆ’ ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.</p>.<p>ನಗರದ ಹಾಸನಾಂಬಾ ಕಲಾಕ್ಷೇತ್ರದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಮೈಸೂರು ವಿಭಾಗದ ಪ್ರಾಥಮಿಕ ಶಿಕ್ಷಾ ವರ್ಗ-2021ರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿ ಸಂಘಟನೆ, ಶಿಸ್ತು ಹಾಗೂ ಯೋಜನೆ ಕೊರತೆ ಇರುವುದರಿಂದ ದೇಶದಲ್ಲೇ ಬಹುಸಂಖ್ಯಾತರಾದರೂ ಹಿಂದೂ ಧರ್ಮ ದುರ್ಬಲವಾಗಿದೆ’ ಎಂದರು.</p>.<p>‘ಜಾತಿ ಪದ್ಧತಿ, ಭಾಷೆಯ ವಿಷಮತೆ, ಉತ್ತರ ದಕ್ಷಿಣ ಎಂಬ ಲೋಪಗಳು, ಆರ್ಯ ದ್ರಾವಿಡ ಎಂಬ ವಿಚಾರದ ಚರ್ಚೆಗಳು ಹಿಂದೂ ಧರ್ಮವನ್ನು ಛಿದ್ರ ಮಾಡಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬಂದಾಗ ಮಾತ್ರ ಅತ್ಯಂತ ಶಕ್ತಿಶಾಲಿ ಸಮಾಜವಾಗಲು ಸಾಧ್ಯ’ ಎಂದು ಹೇಳಿದರು.</p>.<p>ಕಾರ್ಯಕ್ರಮಕ್ಕೆ ಮೊದಲು ಹಾಸನಾಂಬಾ ದೇವಸ್ಥಾನ ಬಳಿಯಿಂದ ಗಣವೇಷಧಾರಿಗಳು ಮೆರವಣಿಗೆ ಹೊರಟು ಹೊಸಲೈನ್ ರಸ್ತೆ, ಗಾಂಧಿ ಬಜಾರ್, ಸುಭಾಷ್ ವೃತ್ತ, ಎನ್.ಆರ್ ವೃತ್ತ. ಮಹಾವೀರ ವೃತ್ತ, ಅಗ್ರಹಾರ ರಸ್ತೆ, ಅರಳಪೇಟೆ ರಸ್ತೆ, ಸಹ್ಯಾದ್ರಿ ರಸ್ತೆ ಮೂಲಕ ಆಕರ್ಷಕ ಪಥ ಸಂಚಲನ ನಡೆಸಿದರು.</p>.<p>ಕಾರ್ಯಕ್ರಮದಲ್ಲಿ ಸಂಘದ ಶಿಬಿರಾಧಿಕಾರಿ ಲಕ್ಷ್ಮೀಕಾಂತ್, ಹಿರಿಯ ಪ್ರಚಾರಕ ದಾ.ಮ. ರವೀಂದ್ರ, ಪ್ರಾಂತ ಕಾರ್ಯಕಾರಣಿ ಸದಸ್ಯ ಲಕ್ಷ್ಮೀನಾರಾಯಣ ಶಾಸ್ತ್ರಿ, ಮೈಸೂರು ವಿಭಾಗದ ಕಾರ್ಯವಾಹ ನಾರ್ವೇ ವಿಜಯಕುಮಾರ್, ಸಹ ಕಾರ್ಯವಾಹ ಮಹೇಶ್, ಪ್ರಚಾರಕ ಅಕ್ಷಯ್, ಮೋಹನ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>