<p><strong>ಹೊಳೆನರಸೀಪುರ:</strong> ಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಅಕ್ರಮ ನಡೆಯುತ್ತಿದ್ದು ಇದನ್ನು ಪ್ರಶ್ನಿಸಿದರೆ ನಮ್ಮನ್ನೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿದ ಹಮಾಲರು ಸೋಮವಾರ ಪ್ರತಿಭಟನೆ ನಡೆಸಿದರು.</p>.<p>ವ್ಯವಸ್ಥಾಪಕ ಕೃಷ್ಣಪ್ಪ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಪಡಿತರ ವಿತರಣೆ ಲಾರಿಯ ಹಮಾಲ ಶಿವಶಂಕರ ದೂರಿದರು. ಇದನ್ನು ಪ್ರಶ್ನಿಸಿದ ನಮ್ಮನ್ನು ನಿಂದಿಸಿದ್ದಾರೆ ಎಂದು ಹಮಾಲರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ತಾಲ್ಲೂಕಿನಲ್ಲಿ 118 ನ್ಯಾಯಬೆಲೆ ಅಂಗಡಿಗಳಿವೆ. ಈ ಅಂಗಡಿಗಳಿಗೆ ಪಡಿತರ ತುಂಬುವ ಸಂದರ್ಭದಲ್ಲಿ ಪ್ರತಿ ಅಂಗಡಿಗೆ ಅಕ್ಕಿ ಕಡಿಮೆ ಲೋಡ್ ಮಾಡಿಸುತ್ತಾರೆ. ಪ್ರತಿ ಅಂಗಡಿಯಿಂದ ₹ 700 ಪಡೆಯುತ್ತಾರೆ, ಇದರ ಬಗ್ಗೆ ಕೇಳಿದರೆ ಶಿರಸ್ತೇದಾರರಿಗೆ ₹ 200 ಮತ್ತು ಆಹಾರ ನಿರೀಕ್ಷಕರಿಗೆ ₹ 500 ಮಾಮೂಲಿ ಕೊಡಬೇಕು ಎಂದು ಗದರಿಸುತ್ತಾರೆ’ ಎಂದು ಹಮಾಲರು ದೂರಿದರು.</p>.<p>‘ಹಮಾಲರು ಇಲ್ಲದ ವೇಳೆ ರಾತ್ರಿ ಸಮಯದಲ್ಲಿ ಕಳ್ಳತನದಲ್ಲಿ ಪಡಿತರ ಕಳ್ಳಸಾಗಣೆ ಮಾಡುತ್ತಾರೆ. ಅದು ಗೊತ್ತಾಗಿ ನಾವು ಪ್ರಶ್ನಿಸಿದಕ್ಕೆ ನಮಗೆಲ್ಲಾ ಬೈದಿದ್ದಾರೆ ಎಂದು ದೂರಿದ ಹಮಾಲರು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದರೆ ಅವ್ಯವಹಾರ ಬೆಳಿಕಿಗೆ ಬರಲಿದೆ. ತನಿಖೆ ನಡೆಸಿ’ ಎಂದು ಸ್ಥಳಕ್ಕೆ ಆಗಮಿಸಿದ್ದ ಆಹಾರ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿದರು.</p>.<p>ಹಮಾಲರಾದ ನವೀನ್, ಯೋಗೇಶ್, ರಾಜಣ್ಣ, ಚಂದ್ರಪ್ಪ, ಪುರುಷೋತ್ತಮ್, ರಮೇಶ್, ವಸಂತ, ವಿಜಯ, ಸೋಮ, ಅರವಿಂದ, ನಾಗಣ್ಣ, ಶ್ರೀನಿವಾಸ, ಪ್ರಕಾಶ ಹಾಜರಿದ್ದರು.</p>.<p>‘ನಾವು ನ್ಯಾಯಬೆಲೆ ಅಂಗಡಿಗೆ ಕಳುಹಿಸಿದ್ದ ಅಕ್ಕಿಯಲ್ಲಿ ಹಮಾಲರು ಎರಡು ಚೀಲ ಅಕ್ಕಿಯನ್ನು ವಾಪಸ್ ತಂದಿದ್ದರು. ಇದು ಯಾವ ನ್ಯಾಯಬೆಲೆ ಅಂಗಡಿಗೆ ಕೊಡಬೇಕಾಗಿತ್ತೋ ಅಲ್ಲಿಗೆ ಗುತ್ತಿಗೆದಾರರು ನೀಡಿದರು. ಈ ಕಾರಣದಿಂದ ಹಮಾಲರಿಗೆ ಎಚ್ಚರಿಸಿ ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಿದ್ದೆ. ಈ ಕಾರಣದಿಂದ ಹಮಾಲರು ನನ್ನ ಮೇಲೆ ದೂರುತ್ತಿದ್ದಾರೆ’ ಎಂದು ವ್ಯವಸ್ಥಾಪಕ ಕೃಷ್ಣಪ್ಪ ಹೇಳಿದರು.</p>.<p>ವಿಷಯ ತಿಳಿದು ಸ್ಥಳಕ್ಕೆ ಬಂದ ಪಡಿತರ ವಿಭಾಗದ ಶಿರಸ್ತೇದಾರ್ ರಾಮಚಂದ್ರ ಮಾತನಾಡಿ, ‘ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹಮಾಲರು ದೂರಿದ್ದು ತನಿಖೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಆಹಾರ ಇಲಾಖೆಯ ಡಿಡಿ ಅವರಿಗೂ ವಿಷಯ ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ತನಿಖೆ ನಡೆಸುತ್ತೇವೆ. ಅಕ್ರಮ ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.</p>.<p>ಆಹಾರ ನಿರೀಕ್ಷಕಿ ವೀಣಾ, ಶಿರಸ್ತೇದಾರ್ ಲೋಕೇಶ್, ಸಹಾಯಕ ಪ್ರಸಾದ್ ಇದ್ದರು.</p>.<p>‘ವಿಷಯ ತಿಳಿದು ನಾವು ಟಿ.ಎ.ಪಿ.ಸಿ.ಎಂ.ಎಸ್ ಗೋದಾಮಿಗೆ ಪರಿಶೀಲನೆಗೆ ತೆರಳಿದಾಗ ಹಮಾಲರು ನಮಗೆ ಪರಿಶೀಲನೆ ಮಾಡಲು ಅವಕಾಶ ನೀಡಲಿಲ್ಲ’ ಎಂದು ಆಹಾರ ಇಲಾಖೆ ನಿರೀಕ್ಷಕಿ ವೀಣಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಅಕ್ರಮ ನಡೆಯುತ್ತಿದ್ದು ಇದನ್ನು ಪ್ರಶ್ನಿಸಿದರೆ ನಮ್ಮನ್ನೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿದ ಹಮಾಲರು ಸೋಮವಾರ ಪ್ರತಿಭಟನೆ ನಡೆಸಿದರು.</p>.<p>ವ್ಯವಸ್ಥಾಪಕ ಕೃಷ್ಣಪ್ಪ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಪಡಿತರ ವಿತರಣೆ ಲಾರಿಯ ಹಮಾಲ ಶಿವಶಂಕರ ದೂರಿದರು. ಇದನ್ನು ಪ್ರಶ್ನಿಸಿದ ನಮ್ಮನ್ನು ನಿಂದಿಸಿದ್ದಾರೆ ಎಂದು ಹಮಾಲರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ತಾಲ್ಲೂಕಿನಲ್ಲಿ 118 ನ್ಯಾಯಬೆಲೆ ಅಂಗಡಿಗಳಿವೆ. ಈ ಅಂಗಡಿಗಳಿಗೆ ಪಡಿತರ ತುಂಬುವ ಸಂದರ್ಭದಲ್ಲಿ ಪ್ರತಿ ಅಂಗಡಿಗೆ ಅಕ್ಕಿ ಕಡಿಮೆ ಲೋಡ್ ಮಾಡಿಸುತ್ತಾರೆ. ಪ್ರತಿ ಅಂಗಡಿಯಿಂದ ₹ 700 ಪಡೆಯುತ್ತಾರೆ, ಇದರ ಬಗ್ಗೆ ಕೇಳಿದರೆ ಶಿರಸ್ತೇದಾರರಿಗೆ ₹ 200 ಮತ್ತು ಆಹಾರ ನಿರೀಕ್ಷಕರಿಗೆ ₹ 500 ಮಾಮೂಲಿ ಕೊಡಬೇಕು ಎಂದು ಗದರಿಸುತ್ತಾರೆ’ ಎಂದು ಹಮಾಲರು ದೂರಿದರು.</p>.<p>‘ಹಮಾಲರು ಇಲ್ಲದ ವೇಳೆ ರಾತ್ರಿ ಸಮಯದಲ್ಲಿ ಕಳ್ಳತನದಲ್ಲಿ ಪಡಿತರ ಕಳ್ಳಸಾಗಣೆ ಮಾಡುತ್ತಾರೆ. ಅದು ಗೊತ್ತಾಗಿ ನಾವು ಪ್ರಶ್ನಿಸಿದಕ್ಕೆ ನಮಗೆಲ್ಲಾ ಬೈದಿದ್ದಾರೆ ಎಂದು ದೂರಿದ ಹಮಾಲರು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದರೆ ಅವ್ಯವಹಾರ ಬೆಳಿಕಿಗೆ ಬರಲಿದೆ. ತನಿಖೆ ನಡೆಸಿ’ ಎಂದು ಸ್ಥಳಕ್ಕೆ ಆಗಮಿಸಿದ್ದ ಆಹಾರ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿದರು.</p>.<p>ಹಮಾಲರಾದ ನವೀನ್, ಯೋಗೇಶ್, ರಾಜಣ್ಣ, ಚಂದ್ರಪ್ಪ, ಪುರುಷೋತ್ತಮ್, ರಮೇಶ್, ವಸಂತ, ವಿಜಯ, ಸೋಮ, ಅರವಿಂದ, ನಾಗಣ್ಣ, ಶ್ರೀನಿವಾಸ, ಪ್ರಕಾಶ ಹಾಜರಿದ್ದರು.</p>.<p>‘ನಾವು ನ್ಯಾಯಬೆಲೆ ಅಂಗಡಿಗೆ ಕಳುಹಿಸಿದ್ದ ಅಕ್ಕಿಯಲ್ಲಿ ಹಮಾಲರು ಎರಡು ಚೀಲ ಅಕ್ಕಿಯನ್ನು ವಾಪಸ್ ತಂದಿದ್ದರು. ಇದು ಯಾವ ನ್ಯಾಯಬೆಲೆ ಅಂಗಡಿಗೆ ಕೊಡಬೇಕಾಗಿತ್ತೋ ಅಲ್ಲಿಗೆ ಗುತ್ತಿಗೆದಾರರು ನೀಡಿದರು. ಈ ಕಾರಣದಿಂದ ಹಮಾಲರಿಗೆ ಎಚ್ಚರಿಸಿ ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಿದ್ದೆ. ಈ ಕಾರಣದಿಂದ ಹಮಾಲರು ನನ್ನ ಮೇಲೆ ದೂರುತ್ತಿದ್ದಾರೆ’ ಎಂದು ವ್ಯವಸ್ಥಾಪಕ ಕೃಷ್ಣಪ್ಪ ಹೇಳಿದರು.</p>.<p>ವಿಷಯ ತಿಳಿದು ಸ್ಥಳಕ್ಕೆ ಬಂದ ಪಡಿತರ ವಿಭಾಗದ ಶಿರಸ್ತೇದಾರ್ ರಾಮಚಂದ್ರ ಮಾತನಾಡಿ, ‘ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹಮಾಲರು ದೂರಿದ್ದು ತನಿಖೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಆಹಾರ ಇಲಾಖೆಯ ಡಿಡಿ ಅವರಿಗೂ ವಿಷಯ ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ತನಿಖೆ ನಡೆಸುತ್ತೇವೆ. ಅಕ್ರಮ ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.</p>.<p>ಆಹಾರ ನಿರೀಕ್ಷಕಿ ವೀಣಾ, ಶಿರಸ್ತೇದಾರ್ ಲೋಕೇಶ್, ಸಹಾಯಕ ಪ್ರಸಾದ್ ಇದ್ದರು.</p>.<p>‘ವಿಷಯ ತಿಳಿದು ನಾವು ಟಿ.ಎ.ಪಿ.ಸಿ.ಎಂ.ಎಸ್ ಗೋದಾಮಿಗೆ ಪರಿಶೀಲನೆಗೆ ತೆರಳಿದಾಗ ಹಮಾಲರು ನಮಗೆ ಪರಿಶೀಲನೆ ಮಾಡಲು ಅವಕಾಶ ನೀಡಲಿಲ್ಲ’ ಎಂದು ಆಹಾರ ಇಲಾಖೆ ನಿರೀಕ್ಷಕಿ ವೀಣಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>