<p><strong>ಹೊಳೆನರಸೀಪುರ:</strong> ಜೂನ್ 21ರಂದು ನಡೆಯುವ ಅಂತರರಾಷ್ಟ್ರೀಯ ಯೋಗದಿನ ಆಚರಣೆಯಲ್ಲಿ ಭಾಗವಹಿಸಲಿಚ್ವಿಸುವವರಿಗಾಗಿ ಇಲ್ಲಿನ ಪತಂಜಲಿಯೋಗ ಕೂಟದ ವತಿಯಿಂದ ಯೋಗ ಭವನದಲ್ಲಿ ಉಚಿತ ಯೋಗಾಭ್ಯಾಸ, ಸೂರ್ಯನಮಸ್ಕಾರ ಹಾಗೂ ಪ್ರಾಣಾಯಾಮ ತರಬೇತಿ ನೀಡಲಾಗುತ್ತಿದೆ.</p>.<p>ಪತಂಜಲಿ ಯೋಗ ಕೂಟದ ಅನೇಕರು ಅತ್ಯುತ್ತಮ ಯೋಗ ಪಟುಗಳಿದ್ದು ಅವರ ಜೊತೆಯಲ್ಲಿ ಹೊಸಬರಿಗೂ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯೋಗ ಶಿಕ್ಷಕ ಗಣೇಶ್ಬಾಬು ಯೋಗಾಸನ ಹೇಳಿ ಕೊಡುತ್ತಿದ್ದು ಪ್ರತೀ ಆಸನ ಮಾಡುವಾಗಲೂ ಆ ಆಸನದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸುತ್ತಾರೆ.</p>.<p>‘ಯೋಗಾಸನ ನಮ್ಮ ದೈಹಿಕ ಆರೋಗ್ಯ ಕಾಪಾಡಿ, ದೇಹವನ್ನು ರೋಗ ಮುಕ್ತವಾಗಿಸುತ್ತದೆ. ಪ್ರಾಣಾಯಾಮ ನಮ್ಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಧ್ಯಾನ ನಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ’ ಎಂದರು.</p>.<p>‘ಪತಂಜಲಿ ಯೋಗಕೂಟದಲ್ಲಿ 70 ವರ್ಷ ದಾಟಿದವರು ಅನೇಕರಿದ್ದಾರೆ. ಅವರು ಕಳೆದ ಕೆಲವಾರು ವರ್ಷಗಳಿಂದ ಇಲ್ಲಿ ಯೋಗಾಭ್ಯಾಸ ಮಾಡುತ್ತಾ, ಆರೋಗ್ಯ ಕಾಪಾಡಿಕೊಂಡು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.</p>.<p>ಹಿರಿಯ ಯೋಗಪಟುಗಳಾದ ವಾಸುದೇವ್ಮೂರ್ತಿ, ಲೋಕೇಶ್, ನರಸಿಂಹ, ನಾರಾಯಣ, ಕರುಣಾಕರ ಗುಪ್ತಾ, ಲಲಿತಾ ದಯಾನಂದ್, ಸುಮಾ, ಧನಲಕ್ಷೀ ಅವರೊಂದಿಗೆ ಅಂತರರಾಷ್ಟ್ರೀಯ ಯೋಗದಿನದಲ್ಲಿ ಭಾಗವಹಿಸಲು ಅನೇಕರು ತರಬೇತಿ ಪಡೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ಜೂನ್ 21ರಂದು ನಡೆಯುವ ಅಂತರರಾಷ್ಟ್ರೀಯ ಯೋಗದಿನ ಆಚರಣೆಯಲ್ಲಿ ಭಾಗವಹಿಸಲಿಚ್ವಿಸುವವರಿಗಾಗಿ ಇಲ್ಲಿನ ಪತಂಜಲಿಯೋಗ ಕೂಟದ ವತಿಯಿಂದ ಯೋಗ ಭವನದಲ್ಲಿ ಉಚಿತ ಯೋಗಾಭ್ಯಾಸ, ಸೂರ್ಯನಮಸ್ಕಾರ ಹಾಗೂ ಪ್ರಾಣಾಯಾಮ ತರಬೇತಿ ನೀಡಲಾಗುತ್ತಿದೆ.</p>.<p>ಪತಂಜಲಿ ಯೋಗ ಕೂಟದ ಅನೇಕರು ಅತ್ಯುತ್ತಮ ಯೋಗ ಪಟುಗಳಿದ್ದು ಅವರ ಜೊತೆಯಲ್ಲಿ ಹೊಸಬರಿಗೂ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯೋಗ ಶಿಕ್ಷಕ ಗಣೇಶ್ಬಾಬು ಯೋಗಾಸನ ಹೇಳಿ ಕೊಡುತ್ತಿದ್ದು ಪ್ರತೀ ಆಸನ ಮಾಡುವಾಗಲೂ ಆ ಆಸನದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸುತ್ತಾರೆ.</p>.<p>‘ಯೋಗಾಸನ ನಮ್ಮ ದೈಹಿಕ ಆರೋಗ್ಯ ಕಾಪಾಡಿ, ದೇಹವನ್ನು ರೋಗ ಮುಕ್ತವಾಗಿಸುತ್ತದೆ. ಪ್ರಾಣಾಯಾಮ ನಮ್ಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಧ್ಯಾನ ನಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ’ ಎಂದರು.</p>.<p>‘ಪತಂಜಲಿ ಯೋಗಕೂಟದಲ್ಲಿ 70 ವರ್ಷ ದಾಟಿದವರು ಅನೇಕರಿದ್ದಾರೆ. ಅವರು ಕಳೆದ ಕೆಲವಾರು ವರ್ಷಗಳಿಂದ ಇಲ್ಲಿ ಯೋಗಾಭ್ಯಾಸ ಮಾಡುತ್ತಾ, ಆರೋಗ್ಯ ಕಾಪಾಡಿಕೊಂಡು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.</p>.<p>ಹಿರಿಯ ಯೋಗಪಟುಗಳಾದ ವಾಸುದೇವ್ಮೂರ್ತಿ, ಲೋಕೇಶ್, ನರಸಿಂಹ, ನಾರಾಯಣ, ಕರುಣಾಕರ ಗುಪ್ತಾ, ಲಲಿತಾ ದಯಾನಂದ್, ಸುಮಾ, ಧನಲಕ್ಷೀ ಅವರೊಂದಿಗೆ ಅಂತರರಾಷ್ಟ್ರೀಯ ಯೋಗದಿನದಲ್ಲಿ ಭಾಗವಹಿಸಲು ಅನೇಕರು ತರಬೇತಿ ಪಡೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>