ಗುರುವಾರ, 22 ಜನವರಿ 2026
×
ADVERTISEMENT
ADVERTISEMENT

ಜೆಡಿಎಸ್ ಬೆಳ್ಳಿಹಬ್ಬ | ಜ.24ರಂದು ಸಮಾವೇಶ: ಸಿದ್ಧತೆ ಪರಿಶೀಲಿಸಿದ ಎಚ್.ಡಿ.ಕೆ

Published : 22 ಜನವರಿ 2026, 3:19 IST
Last Updated : 22 ಜನವರಿ 2026, 3:19 IST
ಫಾಲೋ ಮಾಡಿ
Comments
ಮತ ಪತ್ರ ಇವಿಎಂ ಬಗ್ಗೆ ಜೆಡಿಎಸ್ ಚರ್ಚೆ ಮಾಡಿಲ್ಲ. ಕಾಂಗ್ರೆಸ್‌ನವರು 136 ಸೀಟುಗಳನ್ನು ಇವಿಎಂ ಮೂಲಕ ಗಳಿಸಿದರೋ ಮತ ಪತ್ರಗಳ ಮೂಲಕ ಗಳಿಸಿದರೋ? ಮತ ಪತ್ರದಲ್ಲಿ ಯಾವ ಸಮಯದಲ್ಲಿ ಏನು ಬದಲಾವಣೆ ಆಗುತ್ತದೆಯೋ ಗೊತ್ತಿಲ್ಲ
ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ಕಾಂಗ್ರೆಸ್ ಸರ್ಕಾರ ಬಂದ ನಂತರ ನಿತ್ಯ ಜಿಲ್ಲೆಯಲ್ಲಿ ಏನೇನೂ ನಡೆಯುತ್ತಿದೆ ಎಂಬುದರ ಬಗ್ಗೆ ದೇವೇಗೌಡರು ಶಾಸಕರನ್ನು ಕರೆಸಿ ಮಾತನಾಡಿದ್ದಾರೆ. ಅದರಂತೆ ಸಮಾವೇಶ ಮಾಡಲಾಗುತ್ತಿದೆ. ಜಿಲ್ಲೆಯಿಂದ 2 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ
ಎಚ್‌.ಡಿ. ರೇವಣ್ಣ ಶಾಸಕ
ರೇವಣ್ಣ ಅಣತಿಯಂತೆ ವಾಸ್ತು ಪಾಲಿಸಿದ ಕುಮಾರಸ್ವಾಮಿ
ಜೆಡಿಎಸ್ ಸಮಾವೇಶ ಸ್ಥಳ ಪರಿಶೀಲಿಸುವ ವೇಳೆ ರೇವಣ್ಣ ಅವರ ಅಣತಿಯಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಸ್ತು ಪ್ರಕಾರವೇ ಕಾರಿನಲ್ಲಿ ವೇದಿಕೆಯ ಬಳಿಗೆ ಬಂದರು. ಬೆಂಗಳೂರಿನಿಂದ ನೇರವಾಗಿ ಹಾಸನದ ಭುವನಹಳ್ಳಿ ಬಿಜಿಎಸ್‌ಕೆ ಲೇಔಟ್ ಪ್ರದೇಶದ ಬೃಹತ್ ವೇದಿಕೆ ಬಳಿ ಕಾರಿನಲ್ಲಿ ಬಂದ ಕುಮಾರಸ್ವಾಮಿ ಅವರನ್ನು ಕಾರಿನಿಂದ ಇಳಿಯದಂತೆ ತಿಳಿಸಿದ ರೇವಣ್ಣ ವಾಸ್ತು ಪ್ರಕಾರ ಬರುವಂತೆ ಕಾರು ಚಾಲಕನಿಗೆ ಸೂಚಿಸಿದರು. ಮೊದಲಿಗೆ ಕಾರು ದಕ್ಷಿಣ ದಿಕ್ಕಿನಿಂದ ವೇದಿಕೆ ಬಳಿಗೆ ಬಂದಿದ್ದು ಇಳಿಯಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಕಾರಿನಿಂದ ಇಳಿಯದಂತೆ ಸೂಚಿಸಿ ವಾಹನವನ್ನು ಮುಂದಕ್ಕೆ ಸಾಗಿಸಲು ಹೇಳಿದರು. ನಂತರ ಕಾರು ಉತ್ತರ ದಿಕ್ಕಿಗೆ ತೆರಳಿ ಈಶಾನ್ಯ ಮೂಲೆಯಿಂದ ಪೂರ್ವ ದಿಕ್ಕಿಗೆ ಬಂದು ನಿಲ್ಲಿಸಲಾಯಿತು. ಪೂರ್ವಾಭಿಮುಖವಾಗಿ ಕಾರು ನಿಂತ ಬಳಿಕ ಎಚ್.ಡಿ. ಕುಮಾರಸ್ವಾಮಿ ವಾಹನದಿಂದ ಇಳಿದು ವೇದಿಕೆಯತ್ತ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT