<p><strong>ಹಾಸನ:</strong> ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆಯಾಗಿದ್ದು, ಭತ್ತ, ಕಾಫಿ ಕೊಯ್ಲಿಗೆ ಆತಂಕ ಎದುರಾಗಿದೆ.</p>.<p>ಜಿಲ್ಲಾ ಕೇಂದ್ರದಲ್ಲಿ ಸಂಜೆ 5.30ಕ್ಕೆ ಆರಂಭವಾದ ಜಿಟಿಜಿಟಿ ಮಳೆ 45ನಿಮಿಷಕ್ಕೂ ಹೆಚ್ಚು ಹೊತ್ತು ಸುರಿಯಿತು. ಮಲೆನಾಡು ಭಾಗವಾದ ಬೇಲೂರು, ಸಕಲೇಶಪುರ, ಹೆತ್ತೂರು, ಆಲೂರಿನಲ್ಲೂ ಮಳೆಯಾಯಿತು.</p>.<p>‘ಭತ್ತದ ಜೊತೆಗೆ ಕಾಫಿ ಕೊಯ್ಲು ಕೂಡಾ ನಡೆದಿದ್ದು, ಮಳೆಯಿಂದ ತೊಂದರೆಯಾಗುತ್ತಿದೆ. ಕಾಫಿ ಬೀಜಗಳನ್ನು ಕೊಯ್ಲು ಮಾಡಿ, ಒಣಗಿಸುವುದೂ ದುಸ್ತರವಾಗಿದೆ. ಕಾಫಿ ಹಣ್ಣುಗಳು ಉದುರುತ್ತಿವೆ. ಕಾಡಾನೆ ದಾಳಿಯ ಸಂಕಷ್ಟದ ಜೊತೆ ಹೆಚ್ಚಿ ತೊಂದರೆ ಸೇರಿಕೊಂಡಿದೆ’ ಎಂಬುದು ಬೆಳೆಗಾರರ ಅಳಲು.</p>.<p>‘ಸಂಕ್ರಾಂತಿ ಬರುತ್ತಿದ್ದರೂ ಮಳೆ ನಿಲ್ಲುತ್ತಿಲ್ಲ. ಕೊಯ್ಲು ಮಾಡಿರುವ ಭತ್ತವೆಲ್ಲ ತೋಯ್ದಿರುವುದರಿಂದ ಕಾಳು ಬಿಡಿಸಲು ಸಮಸ್ಯೆಯಾಗುತ್ತಿದೆ. ಬಿತ್ತನೆಯಿಂದ ಕಟಾವಿನವರೆಗೂ ಮಳೆ ಕಾಡುತ್ತಿದೆ’ ಎಂದು ಹೆತ್ತೂರಿನ ರೈತರ ರಾಮಕೃಷ್ಣ ಹಾಗೂ ಆಲೂರು ತಾಲ್ಲೂಕಿನ ಕೆ.ಹೊಸಕೋಟೆಯ ದರ್ಶನ್ ಹೇಳಿದರು.</p>.<h2>ಬಾಳೆಹೊನ್ನೂರು: ಜೋರು ಮಳೆ</h2>.<p><strong>ಚಿಕ್ಕಮಗಳೂರು:</strong> ಜಿಲ್ಲೆಯ ಬಾಳೆಹೊನ್ನೂರು ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯಿತು.</p>.<p>ತರೀಕೆರೆ ಸುತ್ತಮುತ್ತ ಹಾಗೂ ಕಳಸ ತಾಲ್ಲೂಕಿನಲ್ಲಿಯೂ ಮಳೆ ಸುರಿಯಿತು. </p>.<p>ಅಡಿಕೆ, ಕಾಫಿ, ಭತ್ತದ ಕೊಯ್ಲು ಆರಂಭಗೊಂಡಿದ್ದು ರೈತರು ಬಹುತೇಕ ಬೆಳೆಗಳನ್ನು ಒಣಗಲು ಅಂಗಳದಲ್ಲಿ ಹಾಕಿದ್ದರು. ದಿಢೀರ್ ಮಳೆಯಿಂದಾಗಿ ಫಸಲು ರಕ್ಷಿಸಲು ಪರದಾಡಿದರು.</p>.<h2><strong>ಕೊಡಗಿನ ಕೆಲವೆಡೆ ಮಳೆ</strong></h2><p>ಮಡಿಕೇರಿ: ದಕ್ಷಿಣ ಕೊಡಗಿನ ಕೆಲವೆಡೆ ಮಂಗಳವಾರ ರಾತ್ರಿ ವರ್ಷದ ಮೊದಲ ಮಳೆ ಸುರಿದಿದೆ. ಹುದಿಕೇರಿ, ಚೆಯ್ಯಂಡಾಣೆ, ಕುಟ್ಟ ಸೇರಿದಂತೆ ಹಲವೆಡೆ ಹಗುರ ಮಳೆಯಾಗಿದೆ.</p><p>ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಒಣಗಲು ಹಾಕಿದ್ದ ಕಾಫಿ ತೋಯ್ದು ಹೋಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ವಾತಾವರಣ ಕಂಡು ಬಂದು, ಬೆಳೆಗಾರರನ್ನು ಆತಂಕಕ್ಕೆ ದೂಡಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆಯಾಗಿದ್ದು, ಭತ್ತ, ಕಾಫಿ ಕೊಯ್ಲಿಗೆ ಆತಂಕ ಎದುರಾಗಿದೆ.</p>.<p>ಜಿಲ್ಲಾ ಕೇಂದ್ರದಲ್ಲಿ ಸಂಜೆ 5.30ಕ್ಕೆ ಆರಂಭವಾದ ಜಿಟಿಜಿಟಿ ಮಳೆ 45ನಿಮಿಷಕ್ಕೂ ಹೆಚ್ಚು ಹೊತ್ತು ಸುರಿಯಿತು. ಮಲೆನಾಡು ಭಾಗವಾದ ಬೇಲೂರು, ಸಕಲೇಶಪುರ, ಹೆತ್ತೂರು, ಆಲೂರಿನಲ್ಲೂ ಮಳೆಯಾಯಿತು.</p>.<p>‘ಭತ್ತದ ಜೊತೆಗೆ ಕಾಫಿ ಕೊಯ್ಲು ಕೂಡಾ ನಡೆದಿದ್ದು, ಮಳೆಯಿಂದ ತೊಂದರೆಯಾಗುತ್ತಿದೆ. ಕಾಫಿ ಬೀಜಗಳನ್ನು ಕೊಯ್ಲು ಮಾಡಿ, ಒಣಗಿಸುವುದೂ ದುಸ್ತರವಾಗಿದೆ. ಕಾಫಿ ಹಣ್ಣುಗಳು ಉದುರುತ್ತಿವೆ. ಕಾಡಾನೆ ದಾಳಿಯ ಸಂಕಷ್ಟದ ಜೊತೆ ಹೆಚ್ಚಿ ತೊಂದರೆ ಸೇರಿಕೊಂಡಿದೆ’ ಎಂಬುದು ಬೆಳೆಗಾರರ ಅಳಲು.</p>.<p>‘ಸಂಕ್ರಾಂತಿ ಬರುತ್ತಿದ್ದರೂ ಮಳೆ ನಿಲ್ಲುತ್ತಿಲ್ಲ. ಕೊಯ್ಲು ಮಾಡಿರುವ ಭತ್ತವೆಲ್ಲ ತೋಯ್ದಿರುವುದರಿಂದ ಕಾಳು ಬಿಡಿಸಲು ಸಮಸ್ಯೆಯಾಗುತ್ತಿದೆ. ಬಿತ್ತನೆಯಿಂದ ಕಟಾವಿನವರೆಗೂ ಮಳೆ ಕಾಡುತ್ತಿದೆ’ ಎಂದು ಹೆತ್ತೂರಿನ ರೈತರ ರಾಮಕೃಷ್ಣ ಹಾಗೂ ಆಲೂರು ತಾಲ್ಲೂಕಿನ ಕೆ.ಹೊಸಕೋಟೆಯ ದರ್ಶನ್ ಹೇಳಿದರು.</p>.<h2>ಬಾಳೆಹೊನ್ನೂರು: ಜೋರು ಮಳೆ</h2>.<p><strong>ಚಿಕ್ಕಮಗಳೂರು:</strong> ಜಿಲ್ಲೆಯ ಬಾಳೆಹೊನ್ನೂರು ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯಿತು.</p>.<p>ತರೀಕೆರೆ ಸುತ್ತಮುತ್ತ ಹಾಗೂ ಕಳಸ ತಾಲ್ಲೂಕಿನಲ್ಲಿಯೂ ಮಳೆ ಸುರಿಯಿತು. </p>.<p>ಅಡಿಕೆ, ಕಾಫಿ, ಭತ್ತದ ಕೊಯ್ಲು ಆರಂಭಗೊಂಡಿದ್ದು ರೈತರು ಬಹುತೇಕ ಬೆಳೆಗಳನ್ನು ಒಣಗಲು ಅಂಗಳದಲ್ಲಿ ಹಾಕಿದ್ದರು. ದಿಢೀರ್ ಮಳೆಯಿಂದಾಗಿ ಫಸಲು ರಕ್ಷಿಸಲು ಪರದಾಡಿದರು.</p>.<h2><strong>ಕೊಡಗಿನ ಕೆಲವೆಡೆ ಮಳೆ</strong></h2><p>ಮಡಿಕೇರಿ: ದಕ್ಷಿಣ ಕೊಡಗಿನ ಕೆಲವೆಡೆ ಮಂಗಳವಾರ ರಾತ್ರಿ ವರ್ಷದ ಮೊದಲ ಮಳೆ ಸುರಿದಿದೆ. ಹುದಿಕೇರಿ, ಚೆಯ್ಯಂಡಾಣೆ, ಕುಟ್ಟ ಸೇರಿದಂತೆ ಹಲವೆಡೆ ಹಗುರ ಮಳೆಯಾಗಿದೆ.</p><p>ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಒಣಗಲು ಹಾಕಿದ್ದ ಕಾಫಿ ತೋಯ್ದು ಹೋಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ವಾತಾವರಣ ಕಂಡು ಬಂದು, ಬೆಳೆಗಾರರನ್ನು ಆತಂಕಕ್ಕೆ ದೂಡಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>