ಮಾತಿಗೆ ಮಾತು ಬೆಳೆದು ಎರಡು ಬಣದವರು ತಳ್ಳಾಡಿ, ಎಳೆದಾಡಿದರು. ವೀಕ್ಷಕರಾದ ಗಾಯತ್ರಿ ಶಾಂತೇಗೌಡ, ಎನ್ಎಸ್ಯುಐ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಎಷ್ಟೇ ಮನವಿ ಮಾಡಿದರೂ ಲೆಕ್ಕಿಸದೇ, ಅವಾಚ್ಯ ಶಬ್ಧಗಳಿಂದ ಕೂಗಾಡಿದರು. ಇದರ ನಡುವೆ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಸಭೆಯಿಂದಲೇ ನಿರ್ಗಮಿಸಿದರು.