<p><strong>ಹಳೇಬೀಡು:</strong> ರಾಜಗೆರೆಯ ಒಡ್ಡಿನಕೆರೆ ಮಂಗಳವಾರ ಕೋಡಿ ಬಿದ್ದಿದೆ. ಮಾದಿಹಳ್ಳಿ ಹೋಬಳಿಯ ಬೆಟ್ಟದಾಲೂರು, ಹೊಲಬಗೆರೆ ಭಾಗದಲ್ಲಿ ಮಳೆ ಸುರಿದಿದ್ದರಿಂದ ಒಡ್ಡಿನ ಕೆರೆ ಭರ್ತಿಯಾಗಿತ್ತು. <br><br>ಕೋಡಿ ನೀರು ಹಳೇಬೀಡಿನ ದ್ವಾರಸಮುದ್ರ ಕೆರೆಗೆ ತಲುಪಿದೆ. ಮೇ ತಿಂಗಳ ಅಂತ್ಯದಲ್ಲಿಯೇ ಒಡ್ಡಿನ ಕೆರೆ ಭರ್ತಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ದ್ವಾರಸಮುದ್ರ ಕೆರೆ ಈ ವರ್ಷ ಬೇಗ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದರು. ಎತ್ತಿನಹೊಳೆ ನಾಲೆಯಲ್ಲಿ ನಿಂತಿರುವ ಮಳೆ ನೀರನ್ನು ಹಳ್ಳಕ್ಕೆ ಹರಿಸಿರುವುದರಿಂದ ಒಡ್ಡಿನಕೆರೆ ಬೇಗ ಭರ್ತಿಯಾಗಿದೆ ಎಂದು ರಾಜಗೆರೆ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು:</strong> ರಾಜಗೆರೆಯ ಒಡ್ಡಿನಕೆರೆ ಮಂಗಳವಾರ ಕೋಡಿ ಬಿದ್ದಿದೆ. ಮಾದಿಹಳ್ಳಿ ಹೋಬಳಿಯ ಬೆಟ್ಟದಾಲೂರು, ಹೊಲಬಗೆರೆ ಭಾಗದಲ್ಲಿ ಮಳೆ ಸುರಿದಿದ್ದರಿಂದ ಒಡ್ಡಿನ ಕೆರೆ ಭರ್ತಿಯಾಗಿತ್ತು. <br><br>ಕೋಡಿ ನೀರು ಹಳೇಬೀಡಿನ ದ್ವಾರಸಮುದ್ರ ಕೆರೆಗೆ ತಲುಪಿದೆ. ಮೇ ತಿಂಗಳ ಅಂತ್ಯದಲ್ಲಿಯೇ ಒಡ್ಡಿನ ಕೆರೆ ಭರ್ತಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ದ್ವಾರಸಮುದ್ರ ಕೆರೆ ಈ ವರ್ಷ ಬೇಗ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದರು. ಎತ್ತಿನಹೊಳೆ ನಾಲೆಯಲ್ಲಿ ನಿಂತಿರುವ ಮಳೆ ನೀರನ್ನು ಹಳ್ಳಕ್ಕೆ ಹರಿಸಿರುವುದರಿಂದ ಒಡ್ಡಿನಕೆರೆ ಬೇಗ ಭರ್ತಿಯಾಗಿದೆ ಎಂದು ರಾಜಗೆರೆ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>