ಕೃಷಿ ಇಲಾಖೆಯ ಸೌಲಭ್ಯ
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ. ಎಲ್ಲ ವರ್ಗದ ರೈತರಿಗೆ ಶೇ 50 ಸಹಾಯ ಧನ ಸೌಲಭ್ಯ ನೀಡಲಾಗುವುದು. ರೈತರು ಕೃಷಿ ಹೊಂಡ ನಿರ್ಮಾಣಕ್ಕೂ ಮೊದಲೇ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆಲುವರಂಗಪ್ಪ.
ಮನೆ ಬಳಕೆಗಾಗಿ ಮಿನಿ ಎಣ್ಣೆ ಗಾಣಗಳನ್ನು ಸಾಮಾನ್ಯ ವರ್ಗದವರಿಗೆ ಶೇ 75 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ 90 ಸಹಾಯಧನ ಮೂಲಕ ನೀಡಲಾಗುತ್ತಿದೆ. ಅರ್ಧ ಎಚ್ಪಿ, 1 ಎಚ್ಪಿ ಮತ್ತು 2 ಎಚ್ಪಿ ಯಂತ್ರಗಳ ಪೂರೈಕೆ ಇದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ವಿವಿಧ ಯಂತ್ರೋಪಕರಣಗಳು, ವೀಡೀ ಸೈಡರ್, ಹುಲ್ಲು ಕತ್ತರಿಸುವ ಯಂತ್ರಗಳನ್ನು ನೀಡಲಾಗುತ್ತಿದೆ. ಬೆಳೆಗೆ ನೀರು ಹಾಯಿಸುವುದಕ್ಕಾಗಿ 2 ಮತ್ತು 2.25 ಇಂಚು ಎಚ್ಡಿಪಿ ಪೈಪ್ಗಳೂ ಲಭ್ಯವಾಗಿವೆ ಎಂದು ತಿಳಿಸಿದ್ದಾರೆ.