<p><strong>ಹಾಸನ:</strong> ‘ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ (ಎಚ್ಆರ್ಪಿ) ಹೆಸರಿನಲ್ಲಿ ಸರ್ಕಾರಿ ಭೂಮಿ<br />ಕಬಳಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕ ಹಾಗೂ ಅಧಿಕಾರಿಗಳ ವಿರುದ್ಧ ನಿವೃತ್ತ<br />ತಹಶೀಲ್ದಾರ್ ಅಣ್ಣೇಗೌಡ ಮಾಡಿರುವ ಆರೋಪ ಸುಳ್ಳು. ಎಚ್ಆರ್ಪಿಯಿಂದ ಭೂಮಿ ಕಬಳಿಸಿರುವ ಅಣ್ಣೇಗೌಡರಬಗ್ಗೆಯೇ ತನಿಖೆಯಾಗಲಿ’ ಎಂದು ದಲಿತ ವಿಮೋಚನಾ ಹಾಗೂ ಮಾನವ ಹಕ್ಕು ವೇದಿಕೆ ಸಂಚಾಲಕ ಆರ್.ಮರಿಜೋಸೆಫ್ ಒತ್ತಾಯಿಸಿದರು.</p>.<p>‘ಮಧ್ಯವರ್ತಿಗಳೇ ಎಚ್ಆರ್ಪಿ ಭೂ ಹಗರಣಕ್ಕೆ ಮೂಲ ಕಾರಣ. ಸರ್ಕಾರ 414 ಪ್ರಕರಣಗಳಲ್ಲಿ ಭೂ<br />ಮಂಜೂರಾತಿ ರದ್ದುಗೊಳಿಸಿದೆ. ಅಕ್ರಮ ಬೆಳಕಿಗೆ ಬಂದ ಬಳಿಕ ಮಧ್ಯವರ್ತಿಗಳು ನಾಪತ್ತೆಯಾಗಿದ್ದಾರೆ.<br />ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಅವರೇ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದುಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.</p>.<p>‘ಮಾಜಿ ಸೈನಿಕನಿಗೆ ಭೂಮಿ ಮಂಜೂರು ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಮಾಜಿ ಸೈನಿಕ ಸರ್ಕಾರಿ<br />ಹುದ್ದೆಯಲ್ಲಿದ್ದು, ಕಾನೂನು ಪ್ರಕಾರ ಎರಡು ಅಥವಾ ನಾಲ್ಕು ಎಕರೆ ಭೂಮಿ ಮಂಜೂರುಮಾಡಿಸಿಕೊಂಡರೆ ಹೇಗೆ ಕಾನೂನು ಬಾಹಿರವಾಗುತ್ತದೆ’ ಎಂದು ಪ್ರಶ್ನಿಸಿದರು.</p>.<p>‘ಚುನಾಯಿತ ಜನಪ್ರತಿನಿಧಿಗಳು ಗಡಿಯಲ್ಲಿ ದೇಶ ಕಾಯಲಿಲ್ಲ. ಅವರ ಮಕ್ಕಳನ್ನೂ ಸೇನೆಗೆ ಕಳಿಸಲಿಲ್ಲ.<br />ಆದರೂ ಬೇನಾಮಿ ಹೆಸರಿನಲ್ಲಿ ಕೆಲ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನೂರಾರು ಎಕರೆಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಜಿಲ್ಲೆಯ ಇಬ್ಬರು ಪ್ರತ್ರಕರ್ತರೂಎಚ್ಆರ್ಪಿಯಲ್ಲಿ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಸಿಕೊಂಡಿದ್ದಾರೆ.ಅಂತಹವರ ವಿರುದ್ಧ ಅಣ್ಣೇಗೌಡ ಏಕೆ ಚಕಾರಎತ್ತುವುದಿಲ್ಲ?’ ಎಂದರು.</p>.<p>‘ಅಣ್ಣೇಗೌಡ ಅವರು ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡಿ, ನಿಜವಾದ ಸಂತ್ರಸ್ತರಿಗೆ ಭೂಮಿ ಸಿಗದಂತೆ<br />ಮಾಡಿ, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು<br />ಆರೋಪಿಸಿದರು.</p>.<p>‘ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ ಪಟ್ಟಿಯಲ್ಲಿ ಹಾಸನ ಉಪ ವಿಭಾಗಾಧಿಕಾರಿ<br />ಬಿ.ಎ. ಜಗದೀಶ್ ಕುಟುಂಬ ಸಹ ಇದೆ. ಅವರ ಕುಟುಂಬಕ್ಕೆ ಜಿಲ್ಲಾಡಳಿತ ಭೂಮಿ ಮಂಜೂರು ಮಾಡಲು 40<br />ವರ್ಷ ಬೇಕಾಯಿತು. ಭೂಮಿ ಮಂಜೂರಾತಿಯಲ್ಲಿ ಲೋಪವಾಗಿಲ್ಲ’ ಎಂದರು.</p>.<p>ಗೋಷ್ಠಿಯಲ್ಲಿ ಆರ್.ಪಿ.ಐ ಜಿಲ್ಲಾಧ್ಯಕ್ಷ ಸತೀಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ<br />ಹೆತ್ತೂರು ನಾಗರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ‘ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ (ಎಚ್ಆರ್ಪಿ) ಹೆಸರಿನಲ್ಲಿ ಸರ್ಕಾರಿ ಭೂಮಿ<br />ಕಬಳಿಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕ ಹಾಗೂ ಅಧಿಕಾರಿಗಳ ವಿರುದ್ಧ ನಿವೃತ್ತ<br />ತಹಶೀಲ್ದಾರ್ ಅಣ್ಣೇಗೌಡ ಮಾಡಿರುವ ಆರೋಪ ಸುಳ್ಳು. ಎಚ್ಆರ್ಪಿಯಿಂದ ಭೂಮಿ ಕಬಳಿಸಿರುವ ಅಣ್ಣೇಗೌಡರಬಗ್ಗೆಯೇ ತನಿಖೆಯಾಗಲಿ’ ಎಂದು ದಲಿತ ವಿಮೋಚನಾ ಹಾಗೂ ಮಾನವ ಹಕ್ಕು ವೇದಿಕೆ ಸಂಚಾಲಕ ಆರ್.ಮರಿಜೋಸೆಫ್ ಒತ್ತಾಯಿಸಿದರು.</p>.<p>‘ಮಧ್ಯವರ್ತಿಗಳೇ ಎಚ್ಆರ್ಪಿ ಭೂ ಹಗರಣಕ್ಕೆ ಮೂಲ ಕಾರಣ. ಸರ್ಕಾರ 414 ಪ್ರಕರಣಗಳಲ್ಲಿ ಭೂ<br />ಮಂಜೂರಾತಿ ರದ್ದುಗೊಳಿಸಿದೆ. ಅಕ್ರಮ ಬೆಳಕಿಗೆ ಬಂದ ಬಳಿಕ ಮಧ್ಯವರ್ತಿಗಳು ನಾಪತ್ತೆಯಾಗಿದ್ದಾರೆ.<br />ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಅವರೇ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದುಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.</p>.<p>‘ಮಾಜಿ ಸೈನಿಕನಿಗೆ ಭೂಮಿ ಮಂಜೂರು ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಮಾಜಿ ಸೈನಿಕ ಸರ್ಕಾರಿ<br />ಹುದ್ದೆಯಲ್ಲಿದ್ದು, ಕಾನೂನು ಪ್ರಕಾರ ಎರಡು ಅಥವಾ ನಾಲ್ಕು ಎಕರೆ ಭೂಮಿ ಮಂಜೂರುಮಾಡಿಸಿಕೊಂಡರೆ ಹೇಗೆ ಕಾನೂನು ಬಾಹಿರವಾಗುತ್ತದೆ’ ಎಂದು ಪ್ರಶ್ನಿಸಿದರು.</p>.<p>‘ಚುನಾಯಿತ ಜನಪ್ರತಿನಿಧಿಗಳು ಗಡಿಯಲ್ಲಿ ದೇಶ ಕಾಯಲಿಲ್ಲ. ಅವರ ಮಕ್ಕಳನ್ನೂ ಸೇನೆಗೆ ಕಳಿಸಲಿಲ್ಲ.<br />ಆದರೂ ಬೇನಾಮಿ ಹೆಸರಿನಲ್ಲಿ ಕೆಲ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನೂರಾರು ಎಕರೆಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಜಿಲ್ಲೆಯ ಇಬ್ಬರು ಪ್ರತ್ರಕರ್ತರೂಎಚ್ಆರ್ಪಿಯಲ್ಲಿ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಸಿಕೊಂಡಿದ್ದಾರೆ.ಅಂತಹವರ ವಿರುದ್ಧ ಅಣ್ಣೇಗೌಡ ಏಕೆ ಚಕಾರಎತ್ತುವುದಿಲ್ಲ?’ ಎಂದರು.</p>.<p>‘ಅಣ್ಣೇಗೌಡ ಅವರು ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡಿ, ನಿಜವಾದ ಸಂತ್ರಸ್ತರಿಗೆ ಭೂಮಿ ಸಿಗದಂತೆ<br />ಮಾಡಿ, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು<br />ಆರೋಪಿಸಿದರು.</p>.<p>‘ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ ಪಟ್ಟಿಯಲ್ಲಿ ಹಾಸನ ಉಪ ವಿಭಾಗಾಧಿಕಾರಿ<br />ಬಿ.ಎ. ಜಗದೀಶ್ ಕುಟುಂಬ ಸಹ ಇದೆ. ಅವರ ಕುಟುಂಬಕ್ಕೆ ಜಿಲ್ಲಾಡಳಿತ ಭೂಮಿ ಮಂಜೂರು ಮಾಡಲು 40<br />ವರ್ಷ ಬೇಕಾಯಿತು. ಭೂಮಿ ಮಂಜೂರಾತಿಯಲ್ಲಿ ಲೋಪವಾಗಿಲ್ಲ’ ಎಂದರು.</p>.<p>ಗೋಷ್ಠಿಯಲ್ಲಿ ಆರ್.ಪಿ.ಐ ಜಿಲ್ಲಾಧ್ಯಕ್ಷ ಸತೀಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ<br />ಹೆತ್ತೂರು ನಾಗರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>