ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣದ ಹೋಬಳಿಯ ಬೂದನೂರು ಗ್ರಾಮದ ಸರ್ವೆ ನಂಬರ್ 37 ರ ಉಮೇಶ್ ಎಂಬುವವರ ಜಮೀನಿನಲ್ಲಿ ಅಕ್ರಮವನ್ನು ಮರಗಳನ್ನು ಕಡಿಯಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಸಕಲಶಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಹೊನ್ನೆ, ನಂದಿ, ನೇರಳೆ, ಹಲಸು ಸೇರಿದಂತೆ ಸುಮಾರು 50–60 ಮರಗಳನ್ನು ಜೆಸಿಬಿಯಿಂದ ಕಡಿದಿರುವುದು ಕಂಡು ಬಂದಿದೆ.