ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರಿನಿಂದ ಹಾಸನಕ್ಕೆ ಸಚಿವರು ಪ್ರಯಾಣಿಸುತ್ತಿದ್ದಾಗ ಹಿರೀಸಾವೆ– ಚನ್ನರಾಯಪಟ್ಟಣ ಮಧ್ಯದಲ್ಲಿರುವ ಗೂಳಿಹೊನ್ನೇನಹಳ್ಳಿ (ಸೋಮವಾರಸಂತೆ) ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿತ್ತು. ಅದನ್ನು ಗಮನಿಸಿದ ಸಚಿವರು ಅವರ ವಾಹನ ನಿಲ್ಲಿಸಿ, ಸಾರ್ವಜನಿಕರ ಸಹಾಯದಿಂದ ಕಾರಿನಲ್ಲಿ ಇದ್ದವರನ್ನು ರಕ್ಷಿಸಿ ಉಪಚರಿಸಿದರು. ಆಪ್ತ ಸಹಾಯಕರ ಕಾರಿನಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.