ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ ಚುನಾವಣೆ: ಕಾರ್ಯಕರ್ತರ ಮಾರಾಮಾರಿ, ಮೂವರಿಗೆ ಗಾಯ

ಅರಸೀಕೆರೆ: ಬಿಜೆಪಿ ಪ್ರಚಾರ ಸಭೆ
Last Updated 30 ನವೆಂಬರ್ 2021, 13:34 IST
ಅಕ್ಷರ ಗಾತ್ರ

ಅರಸೀಕೆರೆ: ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಚ್‌.ಎಂ.ವಿಶ್ವನಾಥ್‌ ಪರ ಪ್ರಚಾರ ಸಭೆಯಲ್ಲಿ ಮಂಗಳವಾರ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಗಾಯಗೊಂಡರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜೊತೆಗೆ ಮುಖಂಡ ಅಣ್ಣನಾಯಕನಹಳ್ಳಿ ವಿಜಯ್‌ಕುಮಾರ್ ಅವರನ್ನು ವೇದಿಕೆ ಮೇಲೆ ಕುಳ್ಳಿರಿಸಿದ್ದಕ್ಕೆ ಮತ್ತೊಬ್ಬ ಮುಖಂಡ ಎನ್.ಆರ್ ಸಂತೋಷ್ ಪರ ಬಣ ಆಕ್ಷೇಪವ್ಯಕ್ತಪಡಿಸಿತು.

ಸಂತೋಷ್‌ ಭಾಷಣದ ವೇಳೆ ವಿಜಯಕುಮಾರ್‌ ಬಣ ವಿರೋಧ ವ್ಯಕ್ತಪಡಿಸಿ,‘ಸಂತೋಷ್ ಅವರು ಸುಳ್ಳು ಕೇಸು ದಾಖಲಿಸಿ ಬಿಜೆಪಿ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ.ಅಂಥವರಿಗೆ ಮಣೆ ಹಾಕುವುದಾದರೆ ಏಕೆ ಬೆಂಬಲ ಕೊಡಬೇಕು’ ಎಂದು ತಗಾದೆ ತೆಗೆದರು.ಸಚಿವರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.

ಸಭೆಯಿಂದ ಸಚಿವರು ನಿರ್ಗಮಿಸಿದ ಬಳಿಕ ಎರಡು ಬಣಗಳ ನಡುವೆ ಮಾರಾಮಾರಿ ಆಯಿತು. ಕುರ್ಚಿಗಳನ್ನು ಬಿಸಾಡಿದರು.ಕಾರ್ಯಕರ್ತ ಮೋಹನ್ ನಾಯ್ಕ ಅವರ ಮೂಗಿಗೆ ಪೆಟ್ಟಾಯಿತು. ಮೋಹನ್ ಸೇರಿದಂತೆ ಸಣ್ಣಪುಟ್ಟ ಗಾಯಗೊಂಡಿದ್ದ ಇತರೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT