<p><strong>ಅರಸೀಕೆರೆ</strong>: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಪರ ಪ್ರಚಾರ ಸಭೆಯಲ್ಲಿ ಮಂಗಳವಾರ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಗಾಯಗೊಂಡರು.</p>.<p>ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜೊತೆಗೆ ಮುಖಂಡ ಅಣ್ಣನಾಯಕನಹಳ್ಳಿ ವಿಜಯ್ಕುಮಾರ್ ಅವರನ್ನು ವೇದಿಕೆ ಮೇಲೆ ಕುಳ್ಳಿರಿಸಿದ್ದಕ್ಕೆ ಮತ್ತೊಬ್ಬ ಮುಖಂಡ ಎನ್.ಆರ್ ಸಂತೋಷ್ ಪರ ಬಣ ಆಕ್ಷೇಪವ್ಯಕ್ತಪಡಿಸಿತು.</p>.<p>ಸಂತೋಷ್ ಭಾಷಣದ ವೇಳೆ ವಿಜಯಕುಮಾರ್ ಬಣ ವಿರೋಧ ವ್ಯಕ್ತಪಡಿಸಿ,‘ಸಂತೋಷ್ ಅವರು ಸುಳ್ಳು ಕೇಸು ದಾಖಲಿಸಿ ಬಿಜೆಪಿ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ.ಅಂಥವರಿಗೆ ಮಣೆ ಹಾಕುವುದಾದರೆ ಏಕೆ ಬೆಂಬಲ ಕೊಡಬೇಕು’ ಎಂದು ತಗಾದೆ ತೆಗೆದರು.ಸಚಿವರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.</p>.<p>ಸಭೆಯಿಂದ ಸಚಿವರು ನಿರ್ಗಮಿಸಿದ ಬಳಿಕ ಎರಡು ಬಣಗಳ ನಡುವೆ ಮಾರಾಮಾರಿ ಆಯಿತು. ಕುರ್ಚಿಗಳನ್ನು ಬಿಸಾಡಿದರು.ಕಾರ್ಯಕರ್ತ ಮೋಹನ್ ನಾಯ್ಕ ಅವರ ಮೂಗಿಗೆ ಪೆಟ್ಟಾಯಿತು. ಮೋಹನ್ ಸೇರಿದಂತೆ ಸಣ್ಣಪುಟ್ಟ ಗಾಯಗೊಂಡಿದ್ದ ಇತರೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಪರ ಪ್ರಚಾರ ಸಭೆಯಲ್ಲಿ ಮಂಗಳವಾರ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಗಾಯಗೊಂಡರು.</p>.<p>ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜೊತೆಗೆ ಮುಖಂಡ ಅಣ್ಣನಾಯಕನಹಳ್ಳಿ ವಿಜಯ್ಕುಮಾರ್ ಅವರನ್ನು ವೇದಿಕೆ ಮೇಲೆ ಕುಳ್ಳಿರಿಸಿದ್ದಕ್ಕೆ ಮತ್ತೊಬ್ಬ ಮುಖಂಡ ಎನ್.ಆರ್ ಸಂತೋಷ್ ಪರ ಬಣ ಆಕ್ಷೇಪವ್ಯಕ್ತಪಡಿಸಿತು.</p>.<p>ಸಂತೋಷ್ ಭಾಷಣದ ವೇಳೆ ವಿಜಯಕುಮಾರ್ ಬಣ ವಿರೋಧ ವ್ಯಕ್ತಪಡಿಸಿ,‘ಸಂತೋಷ್ ಅವರು ಸುಳ್ಳು ಕೇಸು ದಾಖಲಿಸಿ ಬಿಜೆಪಿ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ.ಅಂಥವರಿಗೆ ಮಣೆ ಹಾಕುವುದಾದರೆ ಏಕೆ ಬೆಂಬಲ ಕೊಡಬೇಕು’ ಎಂದು ತಗಾದೆ ತೆಗೆದರು.ಸಚಿವರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.</p>.<p>ಸಭೆಯಿಂದ ಸಚಿವರು ನಿರ್ಗಮಿಸಿದ ಬಳಿಕ ಎರಡು ಬಣಗಳ ನಡುವೆ ಮಾರಾಮಾರಿ ಆಯಿತು. ಕುರ್ಚಿಗಳನ್ನು ಬಿಸಾಡಿದರು.ಕಾರ್ಯಕರ್ತ ಮೋಹನ್ ನಾಯ್ಕ ಅವರ ಮೂಗಿಗೆ ಪೆಟ್ಟಾಯಿತು. ಮೋಹನ್ ಸೇರಿದಂತೆ ಸಣ್ಣಪುಟ್ಟ ಗಾಯಗೊಂಡಿದ್ದ ಇತರೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>