ಗಲಾಟೆಗೆ ಮನೆಯ ಮೇಲೆ ಮಲಗಿದ್ದ ಲಿಂಗರಾಜು ಅಣ್ಣ ಮಗ ಸುದರ್ಶನ್ ಕೆಳಗೆ ಬಂದಾಗ ಆವನ ಮೇಲೆಯೂ ಹಲ್ಲೆ ಮಾಡಿ, ಬೆದರಿಕೆ ಹಾಕಿದ್ದಾರೆ. ನಂತರ ಕಾರು ಮತ್ತು ಬೈಕ್ಗಳಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಬೆಂಗಳೂರಿನ ಶಾಂತಿನಗರ, ಬಸಪ್ಪ ರಸ್ತೆ, ರಾಚಪ್ಪ ಗಾರ್ಡನ್ ಹತ್ತಿರ ವಾಸಿಯಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಲಾಕ್ಡೌನ್ ಆದಾಗಿನಿಂದ ಹೋಬಳಿಯ ಕಮರವಳ್ಳಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಮಕ್ಕಳಿಗೆ ಆನ್ಲೈನ್ ತರಗತಿ ಆರಂಭವಾದ ಹಿನ್ನೆಲೆಯಲ್ಲಿ ಲಿಂಗರಾಜು ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿಗೆ ಹೋಗಿದ್ದರು.