<p><em>ಹಿರೀಸಾವೆ</em>: ಹೋಬಳಿಯ ಚೋಳಂಬಳಿಯ ವೆಂಕಟರಮಣ ಅರಳಿಕಟ್ಟೆ ವೃತ್ತದ ಬಳಿ ಶುಕ್ರವಾರ ರಾತ್ರಿಕಮರವಳ್ಳಿಯ ಸುದೀಪ (25) ಎಂಬುವರ ತಲೆಗೆ ಸುತ್ತಿಗೆ ಹಾಗೂ ಲಾಂಗ್ನಿಂದ ಹೊಡೆದು ಕೊಲೆ ಮಾಡಲಾಗಿದೆ.</p>.<p>ಸುದೀಪ ಸ್ನೇಹಿತ ಮಂಜುನಾಥ್ ಜೊತೆ ಹಿರೀಸಾವೆಯಿಂದ ಸ್ವಗ್ರಾಮಕ್ಕೆ ಬೈಕ್ನಲ್ಲಿ ಬರುವಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಕೆಳಗೆ ಬಿದ್ದಿದೆ. ಕಾರಿನಿಂದ ಇಳಿದ ಮೂವರು ದುಷ್ಕರ್ಮಿಗಳು, ಓಡಿ ಹೋಗುವಂತೆ ಮಂಜುನಾಥ್ ಅವರಿಗೆ ಸೂಚಿಸಿದ್ದಾರೆ. ಸುದೀಪ ತಲೆಗೆ ಸುತ್ತಿಗೆ ಮತ್ತು ಲಾಂಗ್ನಿಂದ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಹಿರೀಸಾವೆ ಠಾಣೆ ಎಸ್ಐ ಶ್ರೀನಿವಾಸ್ ತಿಳಿಸಿದರು.</p>.<p>ಕಳೆದ ವರ್ಷ ಬೆಂಗಳೂರಿನ ರೌಡಿ ಲಿಂಗರಾಜು ಎಂಬಾತನನ್ನು ಕಮರವಳ್ಳಿಯ ತೋಟದ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಲಿಂಗರಾಜು ತೋಟದ ಮನೆಯಲ್ಲಿರುವ ಮಾಹಿತಿಯನ್ನು ಸುದೀಪ ಕೊಲೆ ಆರೋಪಿಗಳಿಗೆ ತಿಳಿಸಿದ್ದರು. ಈ ಪ್ರಕರಣದಲ್ಲಿ 10ನೇ ಆರೋಪಿಯಾಗಿದ್ದ ಸುದೀಪ 6 ತಿಂಗಳು ಜೈಲಿನಲ್ಲಿದ್ದರು. ಮೇ 12ರಂದು ಪ್ರಕರಣ ಖುಲಾಸೆಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಹಿರೀಸಾವೆ</em>: ಹೋಬಳಿಯ ಚೋಳಂಬಳಿಯ ವೆಂಕಟರಮಣ ಅರಳಿಕಟ್ಟೆ ವೃತ್ತದ ಬಳಿ ಶುಕ್ರವಾರ ರಾತ್ರಿಕಮರವಳ್ಳಿಯ ಸುದೀಪ (25) ಎಂಬುವರ ತಲೆಗೆ ಸುತ್ತಿಗೆ ಹಾಗೂ ಲಾಂಗ್ನಿಂದ ಹೊಡೆದು ಕೊಲೆ ಮಾಡಲಾಗಿದೆ.</p>.<p>ಸುದೀಪ ಸ್ನೇಹಿತ ಮಂಜುನಾಥ್ ಜೊತೆ ಹಿರೀಸಾವೆಯಿಂದ ಸ್ವಗ್ರಾಮಕ್ಕೆ ಬೈಕ್ನಲ್ಲಿ ಬರುವಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಕೆಳಗೆ ಬಿದ್ದಿದೆ. ಕಾರಿನಿಂದ ಇಳಿದ ಮೂವರು ದುಷ್ಕರ್ಮಿಗಳು, ಓಡಿ ಹೋಗುವಂತೆ ಮಂಜುನಾಥ್ ಅವರಿಗೆ ಸೂಚಿಸಿದ್ದಾರೆ. ಸುದೀಪ ತಲೆಗೆ ಸುತ್ತಿಗೆ ಮತ್ತು ಲಾಂಗ್ನಿಂದ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಹಿರೀಸಾವೆ ಠಾಣೆ ಎಸ್ಐ ಶ್ರೀನಿವಾಸ್ ತಿಳಿಸಿದರು.</p>.<p>ಕಳೆದ ವರ್ಷ ಬೆಂಗಳೂರಿನ ರೌಡಿ ಲಿಂಗರಾಜು ಎಂಬಾತನನ್ನು ಕಮರವಳ್ಳಿಯ ತೋಟದ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಲಿಂಗರಾಜು ತೋಟದ ಮನೆಯಲ್ಲಿರುವ ಮಾಹಿತಿಯನ್ನು ಸುದೀಪ ಕೊಲೆ ಆರೋಪಿಗಳಿಗೆ ತಿಳಿಸಿದ್ದರು. ಈ ಪ್ರಕರಣದಲ್ಲಿ 10ನೇ ಆರೋಪಿಯಾಗಿದ್ದ ಸುದೀಪ 6 ತಿಂಗಳು ಜೈಲಿನಲ್ಲಿದ್ದರು. ಮೇ 12ರಂದು ಪ್ರಕರಣ ಖುಲಾಸೆಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>