ಜಿಲ್ಲೆಯ ರಾಮನಾಥಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಶ್ವ ಒಕ್ಕಲಿಗರ ಸಂಘದ ಕೆ.ಆರ್.ಪೇಟೆ ಕೃಷ್ಣ ಸೇರಿದಂತೆ ಹಲವರು, ಮತ್ತೊಂದು ಮಠ ಇರಲಿ ಎಂದು ಬಂದರು. ಬೇರೆ ಸಮಾಜದ ಎಷ್ಟು ಮಠಗಳಿಲ್ಲ? ನಮ್ಮ ಸಮಾಜವೂ ವಿಸ್ತಾರಗೊಳ್ಳಲಿ ಎಂಬ ಉದ್ದೇಶದಿಂದ, ಇನ್ನೊಂದು ಮಠ ಬೆಳೆಯಲಿ ಎಂದು ಸಹಕಾರ ನೀಡಿದ್ದೇವೆ. ಅದು ತಪ್ಪಾ’ ಎಂದು ಪ್ರಶ್ನಿಸಿದರು.