‘ಶಾಸಕ ಎಚ್.ಡಿ.ರೇವಣ್ಣ ಅವರು ಹಾಸನದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದುಯಾವತ್ತೂ ಹೇಳಿಲ್ಲ. ಆದರೆ, ಶಾಸಕರು ತನ್ನ ವಿರುದ್ಧ ರೇವಣ್ಣ ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿರುವುದು ದರ್ಪದಮಾತು. ಅದಕ್ಕಿಂತ ಕಡಿಮೆ ಮತ ಬಂದರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗುತ್ತೇನೆ ಎನ್ನುವುದು ಯಾವ ರೀತಿಯ ವರ್ತನೆ.ತಾಕತ್ತಿದ್ದರೆ ಶಾಸಕರೇ ಹೊಳೆನರಸೀಪುರಕ್ಕೆ ಹೋಗಿ ನಿಂತು, ತನು, ಮನ,ಧನ ಎಲ್ಲವನ್ನು ಖರ್ಚು ಮಾಡಲಿ’ ಎಂದು ಸವಾಲು ಹಾಕಿದರು.