<p><strong>ಅರಸೀಕೆರೆ</strong>: ಗ್ರಾಮಗಳಲ್ಲಿ ಹಬ್ಬ , ಜಾತ್ರಾ ಮಹೋತ್ಸವಗಳನ್ನು ಗ್ರಾಮಸ್ಥರು ಆಚರಿಸುತ್ತಿರುವುದರಿಂದ ಶಾಂತಿ ನೆಮ್ಮದಿ ಸೌಹಾರ್ದದಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಬೊಮ್ಮಸಮುದ್ರ ಗ್ರಾಮದ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದ ಪೂಜೆ ನಂತರ ಅವರು ಆಶೀರ್ವಚನ ನೀಡಿದರು. ಗ್ರಾಮಸ್ಥರಲ್ಲಿ ಮನಸ್ತಾಪ ಬರದಂತೆ , ಒಗ್ಗೂಡಿ ಹೋಗಲು ಹಿರಿಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.</p>.<p>ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ದಾಸೋಹ ಮತ್ತು ಮಾನವೀಯತೆ ಅಳವಡಿಸಿಕೊಂಡಾಗ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ಹೇಳಿದರು.</p>.<p>ಗುಡಿ ಗೌಡ್ರು ಬಸವರಾಜಪ್ಪ , ಮುಖಂಡರಾದ ಬಿ.ಎಂ. ಮಲ್ಲಿಕಾರ್ಜುನ್ , ಶಿವಕುಮಾರ್ , ಚನ್ನಬಸಪ್ಪ , ಮಹೇಶ್ವರಪ್ಪ , ಕೊಡ್ಲಿ ಬಸವರಾಜ್ , ಬೊಮ್ಮಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ಗ್ರಾಮಗಳಲ್ಲಿ ಹಬ್ಬ , ಜಾತ್ರಾ ಮಹೋತ್ಸವಗಳನ್ನು ಗ್ರಾಮಸ್ಥರು ಆಚರಿಸುತ್ತಿರುವುದರಿಂದ ಶಾಂತಿ ನೆಮ್ಮದಿ ಸೌಹಾರ್ದದಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಬೊಮ್ಮಸಮುದ್ರ ಗ್ರಾಮದ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದ ಪೂಜೆ ನಂತರ ಅವರು ಆಶೀರ್ವಚನ ನೀಡಿದರು. ಗ್ರಾಮಸ್ಥರಲ್ಲಿ ಮನಸ್ತಾಪ ಬರದಂತೆ , ಒಗ್ಗೂಡಿ ಹೋಗಲು ಹಿರಿಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.</p>.<p>ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ದಾಸೋಹ ಮತ್ತು ಮಾನವೀಯತೆ ಅಳವಡಿಸಿಕೊಂಡಾಗ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ಹೇಳಿದರು.</p>.<p>ಗುಡಿ ಗೌಡ್ರು ಬಸವರಾಜಪ್ಪ , ಮುಖಂಡರಾದ ಬಿ.ಎಂ. ಮಲ್ಲಿಕಾರ್ಜುನ್ , ಶಿವಕುಮಾರ್ , ಚನ್ನಬಸಪ್ಪ , ಮಹೇಶ್ವರಪ್ಪ , ಕೊಡ್ಲಿ ಬಸವರಾಜ್ , ಬೊಮ್ಮಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>