ಪ್ರೀತಂ ಜೆ.ಗೌಡ ಆಕಸ್ಮಿಕ ಕೂಸು, ಅದೃಷ್ಟದಿಂದ ಶಾಸಕನಾದ ಎಂದವರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರನೀಡಿದ್ದಾರೆ. ಉಗನೆ, ಬೈಲಹಳ್ಳಿ, ಸಾಲಗಾಮೆ, ಸೀಗೆ, ಯಲಗುಂದ ಪಂಚಾಯಿತಿ ವರಿಷ್ಠರ ಸ್ಥಾನಕ್ಕೆ ಜೆಡಿಎಸ್ ಸ್ಪರ್ಧಿಸಲಿಲ್ಲ.ಜಿಲ್ಲೆಯ ಜನರು ಸರ್ವಾಧಿಕಾರಿ ಧೋರಣೆ ಒಪ್ಪುವುದಿಲ್ಲ. ಜನರ ಅಪೇಕ್ಷೆಗೆ ಅನುಗುಣವಾಗಿ ಕೆಲಸ ಮಾಡಿದರೆ ಮಾತ್ರ ಜನರು ಉಳಿಸಿಕೊಳ್ಳುತ್ತಾರೆ. ಸರ್ವಾಧಿಕಾರಿಯಂತೆ ನಡೆದುಕೊಂಡರೆ ಮನೆಗೆ ಕಳಿಸುತ್ತಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಬೇಲಿ ಕಿತ್ತುಹಾಕಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೆ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಸಾಲಗಾಮೆ ಒಂದು ಸುತ್ತು ಜೆಡಿಎಸ್ ಮುಂದೆ ಇತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚು ಗೆದ್ದಿದ್ದಾರೆ. ಆದ್ದರಿಂದ ಐದು ಪಂಚಾಯಿತಿಗಳಲ್ಲೂ ಅವಿರೋಧ ಆಯ್ಕೆಯಾಗಿದೆ ಎಂದರು.