ಎಂ.ಕೃಷ್ಣಮೂರ್ತಿರಾವ್ ಸಾಹಿತ್ಯ ಕ್ಷೇತ್ರದಲ್ಲಿ ಬೇಲೂರು ಕೃಷ್ಣಮೂರ್ತಿ ಆಗಿ ಗುರುತಿಸಿಕೊಂಡರು. ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇರ್ಪಡೆಗೊಂಡು ನಿವೃತ್ತಿಯಾದರು. ನೂರಕ್ಕೂ ಅಧಿಕ ಕನ್ನಡ ಸಾಮಾಜಿಕ ನಾಟಕಗಳ ರಚಿಸಿ, ಸ್ವತಃ ಅಭಿನಯ ಮಾಡಿದ್ದಲ್ಲದೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೃಷ್ಣಮೂರ್ತಿಯವರು ಶತನಾಟಕ ಸಾರ್ವಭೌಮ ಎಂದೆ ಖ್ಯಾತಿ ಪಡೆದಿದ್ದಾರೆ.