‘ಬುಧವಾರ ರೇವಣ್ಣ ಅವರ ಕುಮ್ಮಕಿನಿಂದ ನನ್ನ ವಿರುದ್ಧ ಪತ್ರಿಕಾಗೋಷ್ಠಿ ಮಾಡಲಾಗಿದೆ. ಈ ಜಮೀನು ವಿವಾದ ಸಂಬಂಧ ಹೈಕೋರ್ಟ್ನಲ್ಲಿ ಹಲವು ಬಾರಿ ದಾವೆ ಹೂಡಿದ್ದು, ಎಲ್ಲ ಪ್ರಕರಣದಲ್ಲೂ ನನ್ನ ಪರ ತೀರ್ಪು ಬಂದಿದೆ. ನ್ಯಾಯಯುತವಾಗಿಯೇ ಜಮೀನು ಪರಭಾರೆ ಮಾಡಲಾಗಿದ್ದು, ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಕೊಳ್ಳಲು ರೇವಣ್ಣ ಈ ರೀತಿ ಬೇರೆಯವರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.