<p><strong>ಅರಕಲಗೂಡು</strong>: ಮೃತಪಟ್ಟ ವ್ಯಕ್ತಿಯ ಶವವನ್ನು ಕೊಡದ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಇಲ್ಲಿನ ತಾಲ್ಲೂಕು ಆಸ್ಪತ್ರೆ ಎದುರು ಶನಿವಾರ ಪತ್ರಿಭಟನೆ ನಡೆಸಿದರು.</p>.<p>ತಾಲ್ಲೂಕಿನ ದಡದಹಳ್ಳಿ ನಿವಾಸಿ ರವಿ ಅವರಿಗೆ ಶನಿವಾರ ಬೆಳ್ಳಿಗ್ಗೆ 8.30 ಕ್ಕೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆತರುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ನಂತರ ರವಿ ಅವರನ್ನು ಆಸ್ಪತ್ರೆಗೆ ಕರೆತಂದು ಡಾ. ಮಂಜುನಾಥ್ ಅವರಿಗೆ ತೋರಿಸಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.</p>.<p>ರಾತ್ರಿ ಕರ್ತವ್ಯ ಮುಗಿಸಿದ ಡಾ.ಮಂಜುನಾಥ, ಎಂಎಲ್ಸಿಯಲ್ಲಿ ದಾಖಲಿಸಿ, ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ಮನೆಗೆ ತೆರಳಿದ್ದರು. ನಂತರ ಬಂದ ಬೇರೆ ವ್ಯೆದ್ಯರು, ಇದನ್ನು ಗಮನಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ಶವ ನೀಡಲು ವಿಳಂಬ ಮಾಡಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಶವ ಕೊಡುವಂತೆ ವ್ಯೆದ್ಯ ಡಾ. ರವೀಸ್ ಅವರನ್ನು ಕುಟುಂಬದವರು ಕೇಳಿದ್ದು, ಶವ ಪರೀಕ್ಷೆ ಮಾಡದೇ ಶವ ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದೊಂದು ಸ್ವಾಭಾವಿಕ ಸಾವು. ಮರಣೋತ್ತರ ಪರೀಕ್ಷೆ ಬೇಡ. ಶವವನ್ನು ಕೊಡುವಂತೆ ತಂದೆ, ತಾಯಿ, ತಮ್ಮ, ಹೆಂಡತಿ ಸೇರಿದಂತೆ ಕುಟುಂಬದವರು ಆಗ್ರಹಿಸಿದರು.</p>.<p>ಆದರೆ, ಶವ ನೀಡದಿದ್ದಾಗ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಗರಾಜು ನೇತೃತ್ವದಲ್ಲಿ ಸುಮಾರು 30 ಜನರು, ಕುಟುಂಬದವರ ಜೊತೆ ಸೇರಿ ಪ್ರತಿಭಟನೆ ಆರಂಭಿಸಿದರು. ಶವ ಪರೀಕ್ಷೆ ಮಾಡದೇ ಶವವನ್ನು ಹಸ್ತಾಂತರ ಮಾಡುವಂತೆ ಒತ್ತಾಯಿಸಿದರು.</p>.<p>ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಮತ್ತು ಪೋಲೀಸರು, ತಾಲ್ಲೂಕು ಆಡಳಿತ ವ್ಯೆದ್ಯಾಧಿಕಾರಿಗಳ ಜೊತೆ ಚರ್ಚಿಸಿದರು. ನಂತರ ವೈದ್ಯರು ಶವ ನೀಡಲು ಒಪ್ಪಿದ್ದು, ಪ್ರತಿಭಟನೆ ಹಿಂಪಡೆಯಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು</strong>: ಮೃತಪಟ್ಟ ವ್ಯಕ್ತಿಯ ಶವವನ್ನು ಕೊಡದ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಇಲ್ಲಿನ ತಾಲ್ಲೂಕು ಆಸ್ಪತ್ರೆ ಎದುರು ಶನಿವಾರ ಪತ್ರಿಭಟನೆ ನಡೆಸಿದರು.</p>.<p>ತಾಲ್ಲೂಕಿನ ದಡದಹಳ್ಳಿ ನಿವಾಸಿ ರವಿ ಅವರಿಗೆ ಶನಿವಾರ ಬೆಳ್ಳಿಗ್ಗೆ 8.30 ಕ್ಕೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆತರುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ನಂತರ ರವಿ ಅವರನ್ನು ಆಸ್ಪತ್ರೆಗೆ ಕರೆತಂದು ಡಾ. ಮಂಜುನಾಥ್ ಅವರಿಗೆ ತೋರಿಸಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.</p>.<p>ರಾತ್ರಿ ಕರ್ತವ್ಯ ಮುಗಿಸಿದ ಡಾ.ಮಂಜುನಾಥ, ಎಂಎಲ್ಸಿಯಲ್ಲಿ ದಾಖಲಿಸಿ, ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ಮನೆಗೆ ತೆರಳಿದ್ದರು. ನಂತರ ಬಂದ ಬೇರೆ ವ್ಯೆದ್ಯರು, ಇದನ್ನು ಗಮನಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ಶವ ನೀಡಲು ವಿಳಂಬ ಮಾಡಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಶವ ಕೊಡುವಂತೆ ವ್ಯೆದ್ಯ ಡಾ. ರವೀಸ್ ಅವರನ್ನು ಕುಟುಂಬದವರು ಕೇಳಿದ್ದು, ಶವ ಪರೀಕ್ಷೆ ಮಾಡದೇ ಶವ ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದೊಂದು ಸ್ವಾಭಾವಿಕ ಸಾವು. ಮರಣೋತ್ತರ ಪರೀಕ್ಷೆ ಬೇಡ. ಶವವನ್ನು ಕೊಡುವಂತೆ ತಂದೆ, ತಾಯಿ, ತಮ್ಮ, ಹೆಂಡತಿ ಸೇರಿದಂತೆ ಕುಟುಂಬದವರು ಆಗ್ರಹಿಸಿದರು.</p>.<p>ಆದರೆ, ಶವ ನೀಡದಿದ್ದಾಗ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಗರಾಜು ನೇತೃತ್ವದಲ್ಲಿ ಸುಮಾರು 30 ಜನರು, ಕುಟುಂಬದವರ ಜೊತೆ ಸೇರಿ ಪ್ರತಿಭಟನೆ ಆರಂಭಿಸಿದರು. ಶವ ಪರೀಕ್ಷೆ ಮಾಡದೇ ಶವವನ್ನು ಹಸ್ತಾಂತರ ಮಾಡುವಂತೆ ಒತ್ತಾಯಿಸಿದರು.</p>.<p>ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಮತ್ತು ಪೋಲೀಸರು, ತಾಲ್ಲೂಕು ಆಡಳಿತ ವ್ಯೆದ್ಯಾಧಿಕಾರಿಗಳ ಜೊತೆ ಚರ್ಚಿಸಿದರು. ನಂತರ ವೈದ್ಯರು ಶವ ನೀಡಲು ಒಪ್ಪಿದ್ದು, ಪ್ರತಿಭಟನೆ ಹಿಂಪಡೆಯಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>