ಈ ಸಂಬಂಧ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿರುವ ಸಂಘಟನೆಯ ರಾಜಶೇಖರ್, ಎಚ್.ಕೆ.ಸಂದೇಶ್, ಧರ್ಮೆಶ್, ರೂಪ ಹಾಸನ ಟಿ.ಆರ್.ವಿಜಯ್ ಕುಮಾರ್, ಪೃಥ್ವಿಎಂ.ಜಿ, ಎಚ್.ಆರ್.ನವೀನ್ಕುಮಾರ್, ಕೃಷ್ಣದಾಸ್, ‘ಜೀತವಿಮುಕ್ತಗೊಂಡು 27 ವರ್ಷ ಕಳೆದರೂಜಿಲ್ಲಾಡಳಿತ ಕೃಷಿ ಭೂಮಿಯನ್ನು ನೀಡದೆ, ಪುನರ್ವಸತಿ ಸೌಲಭ್ಯ ಕಲ್ಪಿಸದಿರುವುದು ಅತ್ಯಂತ ನಿರ್ಲಕ್ಷ್ಯ ಧೋರಣೆಯಾಗಿದೆ. ದಮನಿತ ಸಮುದಾಯ ಜೀವನ ನಿರ್ವಹಣೆ ಮಾಡಲು ಭೂಮಿ, ಉದ್ಯೋಗವಿಲ್ಲದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮತ್ತಷ್ಟು ಅಂಚಿಗೆ ಒತ್ತರಿಸಲ್ಪಟ್ಟು, ಶೋಚನೀಯ ಪರಿಸ್ಥಿತಿತಲುಪಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.