ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಸಾಧಾರಣ ಮಳೆಯಾಗಿದೆ.
ನಗರದಲ್ಲಿ ರಾತ್ರಿ 7 ಗಂಟೆಗೆ ಆರಂಭವಾದ ತುಂತುರು ಮಳೆ ಒಂದು ತಾಸು ಸುರಿಯಿತು. ಮಳೆಯಿಂದಾಗಿ ಬೀದಿಬದಿ ವ್ಯಾಪಾರಕ್ಕೂಹೊಡೆತ ಬಿತ್ತು. ಸಾರ್ವಜನಿಕರ ಓಡಾಟಕ್ಕೂ ತೊಂದರೆ ಉಂಟಾಯಿತು. ಸಂಜೆ ಮಹಾವೀರ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ಮಳೆಯಲ್ಲಿ ತೊಯ್ದರು.
ಅರಕಲಗೂಡು, ಕೊಣನೂರು, ಸಕಲೇಶಪುರ ಹಾಗೂ ಹೆತ್ತೂರು ಭಾಗದ ಸುತ್ತಮುತ್ತಲ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ.