<p><strong>ಕೊಣನೂರು</strong>: ಹದಿನೈದು ದಿನದಿಂದ ನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಮನಾಥಪುರ ಹೋಬಳಿಯಲ್ಲಿ 30 ಮತ್ತು ಕೊಣನೂರು ಹೋಬಳಿಯಲ್ಲಿ 2 ಮನೆಗಳ ಗೋಡೆಗಳು ಕುಸಿದಿವೆ.</p>.<p>ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮುಚ್ಚಿದ್ದ ರಸ್ತೆ ಗುಂಡಿಗಳು ಮಳೆ ನೀರಿನ ಸೆಳೆತಕ್ಕೆ ಮತ್ತೆ ಬಾಯ್ದೆರೆದಿವೆ. ಅತಿಯಾದ ತೇವಾಂಶದಿಂದ ಮನೆಗಳು ಕುಸಿಯಲಾರಂಭಿಸಿದ್ದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.</p>.<p>ಭಾನುವಾರ ರಾತ್ರಿ ಕೊಣನೂರು ಹೋಬಳಿಯ ಸಿದ್ದಾಪುರದ ಧರ್ಮೇಗೌಡ ಮತ್ತು ರಮೇಶ್ ಅವರ ಮನೆಗಳ ಗೋಡೆಗಳು ಕುಸಿದಿವೆ.</p>.<p>ರಾಮನಾಥಪುರ ಹೋಬಳಿಯ ವ್ಯಾಪ್ತಿಯಲ್ಲಿ ಹೆಚ್ಚಿದ ಮಳೆಯಿಂದಾಗಿ ಬಿಳಗುಲಿ ಗ್ರಾಮದ ಪುಟ್ಟರಾಜು ಎಂಬುವರಿಗೆ ಸೇರಿದ ಬ್ಯಾರಲ್ ಮನೆ ಕುಸಿದು ಅಡಿಯಲ್ಲಿ ಸಿಲುಕಿದ ಕರುವೊಂದು ಮೃತಪಟ್ಟಿದೆ.</p>.<p>ಕೇರಳಾಪುರದಲ್ಲಿ 2 ಮನೆ, ಜಿಟ್ಟೇನಹಳ್ಳಿಯಲ್ಲಿ 2 , ಬೋರೆಕೊಪ್ಪಲಿನಲ್ಲಿ 1, ಬಸವಾಪಟ್ಟಣದಲ್ಲಿ 2, ಬೆಟ್ಟಸೋಗೆಯಲ್ಲಿ 1, ರಾಮನಕೊಪ್ಪಲಿನಲ್ಲಿ 2, ರುದ್ರಪಟ್ಟಣದಲ್ಲಿ 5, ಆನಂದೂರಿನಲ್ಲಿ 2, ಕಂಠಾಪುರದಲ್ಲಿ 1, ಮಧುರನಹಳ್ಳಿಯಲ್ಲಿ 2 ಮನೆಗಳು, ಹನ್ಯಾಳು ಮತ್ತಿತರೆಡೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮನೆಗಳು ಬಿದ್ದಿವೆ ಎಂದು ಕಂದಾಯ ನಿರೀಕ್ಷಕ ಸಿ.ಸ್ವಾಮಿ ತಿಳಿಸಿದ್ದಾರೆ.</p>.<p>ಭಾರಿ ಮಳೆಯಿಂದಾಗಿ ನೀರು ಬಸವಾಪಟ್ಟಣದಲ್ಲಿ 5, ಬ್ಯಾಡರಕೊಪ್ಪಲಿನಲ್ಲಿ 6, ಬೆಟ್ಟಸೋಗೆ ಗ್ರಾಮದಲ್ಲಿ 2 ಮನೆಗಳಿಗೆ ನುಗ್ಗಿದ್ದರಿಂದ ಆಹಾರ ಧಾನ್ಯಗಳು, ಬಟ್ಟೆ ಮತ್ತು 1 ರಾಗಿ ಹಿಟ್ಟಿನ ಗಿರಣಿಯ ಯಂತ್ರವು ಹಾಳಾಗಿದೆ.</p>.<p>ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಸಿ.ಸ್ವಾಮಿ, ‘ಮನೆ ಕಳೆದುಕೊಂಡವರಿಗೆ ತಾತ್ಕಾಲಿವಾಗಿ ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆಯಲು ತಿಳಿಸಿ, ಹಾನಿ ಕುರಿತು ಈಗಾಗಲೇ ತಹಶೀಲ್ದಾರರಿಗೆ ತಿಳಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು</strong>: ಹದಿನೈದು ದಿನದಿಂದ ನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಮನಾಥಪುರ ಹೋಬಳಿಯಲ್ಲಿ 30 ಮತ್ತು ಕೊಣನೂರು ಹೋಬಳಿಯಲ್ಲಿ 2 ಮನೆಗಳ ಗೋಡೆಗಳು ಕುಸಿದಿವೆ.</p>.<p>ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮುಚ್ಚಿದ್ದ ರಸ್ತೆ ಗುಂಡಿಗಳು ಮಳೆ ನೀರಿನ ಸೆಳೆತಕ್ಕೆ ಮತ್ತೆ ಬಾಯ್ದೆರೆದಿವೆ. ಅತಿಯಾದ ತೇವಾಂಶದಿಂದ ಮನೆಗಳು ಕುಸಿಯಲಾರಂಭಿಸಿದ್ದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.</p>.<p>ಭಾನುವಾರ ರಾತ್ರಿ ಕೊಣನೂರು ಹೋಬಳಿಯ ಸಿದ್ದಾಪುರದ ಧರ್ಮೇಗೌಡ ಮತ್ತು ರಮೇಶ್ ಅವರ ಮನೆಗಳ ಗೋಡೆಗಳು ಕುಸಿದಿವೆ.</p>.<p>ರಾಮನಾಥಪುರ ಹೋಬಳಿಯ ವ್ಯಾಪ್ತಿಯಲ್ಲಿ ಹೆಚ್ಚಿದ ಮಳೆಯಿಂದಾಗಿ ಬಿಳಗುಲಿ ಗ್ರಾಮದ ಪುಟ್ಟರಾಜು ಎಂಬುವರಿಗೆ ಸೇರಿದ ಬ್ಯಾರಲ್ ಮನೆ ಕುಸಿದು ಅಡಿಯಲ್ಲಿ ಸಿಲುಕಿದ ಕರುವೊಂದು ಮೃತಪಟ್ಟಿದೆ.</p>.<p>ಕೇರಳಾಪುರದಲ್ಲಿ 2 ಮನೆ, ಜಿಟ್ಟೇನಹಳ್ಳಿಯಲ್ಲಿ 2 , ಬೋರೆಕೊಪ್ಪಲಿನಲ್ಲಿ 1, ಬಸವಾಪಟ್ಟಣದಲ್ಲಿ 2, ಬೆಟ್ಟಸೋಗೆಯಲ್ಲಿ 1, ರಾಮನಕೊಪ್ಪಲಿನಲ್ಲಿ 2, ರುದ್ರಪಟ್ಟಣದಲ್ಲಿ 5, ಆನಂದೂರಿನಲ್ಲಿ 2, ಕಂಠಾಪುರದಲ್ಲಿ 1, ಮಧುರನಹಳ್ಳಿಯಲ್ಲಿ 2 ಮನೆಗಳು, ಹನ್ಯಾಳು ಮತ್ತಿತರೆಡೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಮನೆಗಳು ಬಿದ್ದಿವೆ ಎಂದು ಕಂದಾಯ ನಿರೀಕ್ಷಕ ಸಿ.ಸ್ವಾಮಿ ತಿಳಿಸಿದ್ದಾರೆ.</p>.<p>ಭಾರಿ ಮಳೆಯಿಂದಾಗಿ ನೀರು ಬಸವಾಪಟ್ಟಣದಲ್ಲಿ 5, ಬ್ಯಾಡರಕೊಪ್ಪಲಿನಲ್ಲಿ 6, ಬೆಟ್ಟಸೋಗೆ ಗ್ರಾಮದಲ್ಲಿ 2 ಮನೆಗಳಿಗೆ ನುಗ್ಗಿದ್ದರಿಂದ ಆಹಾರ ಧಾನ್ಯಗಳು, ಬಟ್ಟೆ ಮತ್ತು 1 ರಾಗಿ ಹಿಟ್ಟಿನ ಗಿರಣಿಯ ಯಂತ್ರವು ಹಾಳಾಗಿದೆ.</p>.<p>ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಸಿ.ಸ್ವಾಮಿ, ‘ಮನೆ ಕಳೆದುಕೊಂಡವರಿಗೆ ತಾತ್ಕಾಲಿವಾಗಿ ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆಯಲು ತಿಳಿಸಿ, ಹಾನಿ ಕುರಿತು ಈಗಾಗಲೇ ತಹಶೀಲ್ದಾರರಿಗೆ ತಿಳಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>