ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಅವರು, ‘ಜಯಮಾಲಾ ಸಚಿವರಾಗಿ ಹೀಗೆ ಹೇಳಿಕೆ ನೀಡಿರುವುದು ತಪ್ಪು. ಕೂಡಲೇ ಅವರು ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಬೇಕು. ರಾಜಕೀಯವನ್ನು ಚಿತ್ರರಂಗ ಅಂದುಕೊಂಡಿದ್ದಾರೆ. ಬಹುಶಃ ಅವರು ಅನುಭವದ ಕೊರತೆಯಿಂದ ಹೀಗೆ ಹೇಳಿದ್ದಾರೆ. ಯಾವ ವೇದಿಕೆಯಲ್ಲಿ ಏನು ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.