<p><strong>ಸಕಲೇಶಪುರ (ಹಾಸನ ಜಿಲ್ಲೆ):</strong> ‘ಎಷ್ಟು ಸುಳ್ಳು ಹೇಳ್ತೀರಾ? ಸ್ವಾಭಿಮಾನ ಅಂದ್ರೆ ಏನು ಅಂತ ಗೊತ್ತಾ?. ಬೇರೆಯವರಾಗಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದರು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ದೋಣಿಗಾಲ್ ಬಳಿ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಅವರು, ‘ಬಾಯಿ ಬಿಟ್ರೆ ಸುಳ್ಳು ಹೇಳ್ತೀರಾ. ಇದೇನಾ ನಿಮ್ಮ ಆರ್ಗನೈಜೇಶನ್ ಕಲ್ಚರ್?’ ಎಂದು ತರಾಟೆಗೆ ತೆಗೆದುಕೊಂಡರು.</p>.<p>‘ಹಾಸನ ಬೈಪಾಸ್ ಕಾಮಗಾರಿಗೆ ಸಮಸ್ಯೆ ಇಲ್ಲ. ಒಂದು ಮರ ತೆರವಿಗೆ ವಿಳಂಬ ಮಾಡುತ್ತಾ, ಕಿ.ಮೀ ಗಟ್ಟಲೆ ರಸ್ತೆ ನಿರ್ಮಿಸದೇ ವಿಳಂಬ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.</p>.<p>‘9 ವರ್ಷಗಳಾದರೂ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಗಿದಿಲ್ಲ. ನೀವು ಕೇಂದ್ರ ಸರ್ಕಾರಕ್ಕೆ ಇಂತಹ ವರದಿಗಳನ್ನು ನೀಡುತ್ತೀರಾ? ಅದಕ್ಕೇ ಅವರು ಓದಿದ್ದೇ ಓದಿದ್ದು’ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸುಳ್ಳು ಮಾಹಿತಿಯನ್ನೂ ಖಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ (ಹಾಸನ ಜಿಲ್ಲೆ):</strong> ‘ಎಷ್ಟು ಸುಳ್ಳು ಹೇಳ್ತೀರಾ? ಸ್ವಾಭಿಮಾನ ಅಂದ್ರೆ ಏನು ಅಂತ ಗೊತ್ತಾ?. ಬೇರೆಯವರಾಗಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದರು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ದೋಣಿಗಾಲ್ ಬಳಿ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಅವರು, ‘ಬಾಯಿ ಬಿಟ್ರೆ ಸುಳ್ಳು ಹೇಳ್ತೀರಾ. ಇದೇನಾ ನಿಮ್ಮ ಆರ್ಗನೈಜೇಶನ್ ಕಲ್ಚರ್?’ ಎಂದು ತರಾಟೆಗೆ ತೆಗೆದುಕೊಂಡರು.</p>.<p>‘ಹಾಸನ ಬೈಪಾಸ್ ಕಾಮಗಾರಿಗೆ ಸಮಸ್ಯೆ ಇಲ್ಲ. ಒಂದು ಮರ ತೆರವಿಗೆ ವಿಳಂಬ ಮಾಡುತ್ತಾ, ಕಿ.ಮೀ ಗಟ್ಟಲೆ ರಸ್ತೆ ನಿರ್ಮಿಸದೇ ವಿಳಂಬ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.</p>.<p>‘9 ವರ್ಷಗಳಾದರೂ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಗಿದಿಲ್ಲ. ನೀವು ಕೇಂದ್ರ ಸರ್ಕಾರಕ್ಕೆ ಇಂತಹ ವರದಿಗಳನ್ನು ನೀಡುತ್ತೀರಾ? ಅದಕ್ಕೇ ಅವರು ಓದಿದ್ದೇ ಓದಿದ್ದು’ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸುಳ್ಳು ಮಾಹಿತಿಯನ್ನೂ ಖಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>