<p><strong>ಬಾಣಾವರ</strong>: ‘ಸಮಾಜದಲ್ಲಿನ ಕ್ರಿಯಾಶೀಲ ಪರಿವರ್ತನೆಗೆ ಮಹಿಳೆಯರ ಕೊಡುಗೆ ಅಪಾರ’ ಎಂದು ನಗರ ಠಾಣೆ ಪಿಎಸ್ಐ ಲತಾ ತಿಳಿಸಿದರು.</p>.<p>ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಚಾರಣೆ ಉದ್ಘಾಟಿಸಿ ಮಾತನಾಡಿದರು.</p>.<p>‘ಮಾತೆ ಸಹೋದರಿ ಗೃಹಿಣಿಯಾಗಿ ಎಲ್ಲ ಜವಬ್ದಾರಿಯನ್ನು ಕೌಟುಂಬಿಕ ಚೌಕಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ರಾಜಕೀಯ, ಶೈಕ್ಷಣಿಕ, ಅರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು ಮತ್ತಷ್ಟು ಬಲ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.</p>.<p>ಪ್ರಾಂಶುಪಾಲ ಬಿಳಿಕೆರೆ ದೊರೇಶ್ ಮಾತನಾಡಿ, ‘ಜಗತ್ತಿನ ಪರಿವರ್ತನೆಗೆ ಹೆಣ್ಣು ಕಾರಣ ಎನ್ನುವುದು ಹೆಮ್ಮಯ ಸಂಗತಿ ಅಲ್ಲದೇ ನಾರಿಶಕ್ತಿಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಆಭಿಪ್ರಾಯಪಟ್ಟರು,</p>.<p>ಸಮಾಜ ಸೇವಕ ಕಾಂಚನಮಾಲಾ, ಎಚ್.ಜೆ.ಪ್ರಿಯಾಂಕ, ಕ್ರಿಕೆಟ್ ಕೋಚ್ ಸರಿಯಾಬೇಗಂ, ಪ್ರಾಧ್ಯಪಕಿ ಡಾ.ಪುಷ್ಪಭಾರತ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಣಾವರ</strong>: ‘ಸಮಾಜದಲ್ಲಿನ ಕ್ರಿಯಾಶೀಲ ಪರಿವರ್ತನೆಗೆ ಮಹಿಳೆಯರ ಕೊಡುಗೆ ಅಪಾರ’ ಎಂದು ನಗರ ಠಾಣೆ ಪಿಎಸ್ಐ ಲತಾ ತಿಳಿಸಿದರು.</p>.<p>ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಚಾರಣೆ ಉದ್ಘಾಟಿಸಿ ಮಾತನಾಡಿದರು.</p>.<p>‘ಮಾತೆ ಸಹೋದರಿ ಗೃಹಿಣಿಯಾಗಿ ಎಲ್ಲ ಜವಬ್ದಾರಿಯನ್ನು ಕೌಟುಂಬಿಕ ಚೌಕಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ರಾಜಕೀಯ, ಶೈಕ್ಷಣಿಕ, ಅರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು ಮತ್ತಷ್ಟು ಬಲ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.</p>.<p>ಪ್ರಾಂಶುಪಾಲ ಬಿಳಿಕೆರೆ ದೊರೇಶ್ ಮಾತನಾಡಿ, ‘ಜಗತ್ತಿನ ಪರಿವರ್ತನೆಗೆ ಹೆಣ್ಣು ಕಾರಣ ಎನ್ನುವುದು ಹೆಮ್ಮಯ ಸಂಗತಿ ಅಲ್ಲದೇ ನಾರಿಶಕ್ತಿಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಆಭಿಪ್ರಾಯಪಟ್ಟರು,</p>.<p>ಸಮಾಜ ಸೇವಕ ಕಾಂಚನಮಾಲಾ, ಎಚ್.ಜೆ.ಪ್ರಿಯಾಂಕ, ಕ್ರಿಕೆಟ್ ಕೋಚ್ ಸರಿಯಾಬೇಗಂ, ಪ್ರಾಧ್ಯಪಕಿ ಡಾ.ಪುಷ್ಪಭಾರತ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>