‘ಜುಲೈ 18ರ ರಾತ್ರಿ ಸುಮಾರು 50 ಬಾರಿ ಕರೆ ಮಾಡಿ ಅಧಿಕಾರಿ ತೊಂದರೆ ನೀಡಿದ್ದಾರೆ. ಗುಟ್ಟಾಗಿ ಏನೋ ಮಾತಾಡಬೇಕು, ಈಗಲೇ ಬರಬೇಕು ಎಂದು ಹೇಳುತ್ತಾರೆ. ನನಗೆ ದೃಷ್ಟಿ ದೋಷವಿದ್ದು, ಅಂಗವಿಕಲತೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾಲ್ಕು ದಿನ ನನಗೆ ಸಹಕಾರ ನೀಡದಿದ್ದರೆ ಒಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಇಲಾಖಾ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ’ಎಂದು ಅಳಲು ತೋಡಿಕೊಂಡರು.