ಸೋದರ ಮರಳಿದ ನಂತರ ಮಾತನಾಡಿದ ರೇವಣ್ಣ, ‘ಶೃಂಗೇರಿಯಲ್ಲಿ ಮಾಮೂಲಿ ಅಮಾವಾಸ್ಯೆ ಪೂಜೆ ಮಾಡಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ರಾಜೇಗೌಡ ಅವರು ಆಹ್ವಾನಿಸಿದ್ದರು. ಹರದನಹಳ್ಳಿಯಲ್ಲಿ ಮನೆ ದೇವರ ಪೂಜಾ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಹೆಲಿಕಾಪ್ಟರ್ನಿಂದ ತಾವು ಇಳಿದುಕೊಂಡಿದ್ದು, ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಂಂತ್ರಿ ಕೊಡಗು ಜಿಲ್ಲೆಗೆ ತೆರಳಿದರು’ ಎಂದು ರೇವಣ್ಣ ಸ್ಪಷ್ಟಪಡಿಸಿದರು.