<p>ನಮ್ಮ ಊರು ನಮ್ಮ ಜಿಲ್ಲೆ</p>.<p>ಹಾಸನ: ರಸ್ತೆ ಬದಿ ತಿನಿಸುಗಳ ಮಾರಾಟಕ್ಕಾಗಿ ನಗರದ ಸಹ್ಯಾದ್ರಿ ರಸ್ತೆಯಲ್ಲಿ ₹1.5 ಕೋಟಿ ವೆಚ್ಚದಲ್ಲಿ ಫುಡ್ಕೋರ್ಟ್ ನಿರ್ಮಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ.</p>.<p>ಸಹ್ಯಾದ್ರಿ ವೃತ್ತದಿಂದ ಮಹಾವೀರ ವೃತ್ತದವರೆಗೂ ಸುಮಾರು 500 ಮೀಟರ್ ಉದ್ದ, ಏಳು ಅಡಿ ಅಗಲದ<br />ಗೆಲಾನಿಯಂ ಶೀಟ್ ಛಾವಣಿಯ ಶೆಲ್ಟರ್ಗಳನ್ನು ನಿರ್ಮಿಸಲಾಗಿದೆ. ನೆಲಕ್ಕೆ ಟೈಲ್ಸ್ ಅಳವಡಿಸಿದ್ದು, ಸ್ಟೀಲ್<br />ಬ್ಯಾರಿಕೇಡ್ ಅಳವಡಿಸಲಾಗಿದೆ.</p>.<p>ಶಾಸಕ ಪ್ರೀತಂ ಗೌಡ ಅವರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಮಾತ್ರವಲ್ಲದೇ ವಿವಿಧ ಮೂಲಗಳಿಂದಲೂ<br />ಫುಡ್ ಕೋರ್ಟ್ ನಿರ್ಮಾಣಕ್ಕೆ ಅಗತ್ಯವಾದ ಹಣ ಹೊಂದಿಸಲಾಗಿದೆ.</p>.<p>ಹಲವು ವರ್ಷಗಳಿಂದ ಸಹ್ಯಾದ್ರಿ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದ 88 ಜನರಿಗೆ ಅದೇ ಸ್ಥಳದಲ್ಲಿ<br />ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ. ತಿನಿಸು ಮಾರಾಟಗಾರರಿಗೆ ಸ್ಟೀಲ್ ಪ್ಯಾನಲ್ ಸಿದ್ದ<br />ಪಡಿಸಿಕೊಡೊಲಾಗಿದೆ. ಹಿಂಬದಿ ಕಾಂಪೌಂಡ್ಗೆ ಗ್ರಾಹಕರು ಪ್ಲೇಟ್ಗಳನ್ನಿಟ್ಟುಕೊಂಡು ಆಹಾರ ಸೇವಿಸಲು<br />ಸ್ಟ್ಯಾಂಡ್ ನಿರ್ಮಿಸಲಾಗಿದೆ.</p>.<p>ಸಾಮಾನ್ಯವಾಗಿ ಸಂಜೆ 4 ರಿಂದ ರಾತ್ರಿ 10ರವರೆಗೂ ಹೆಚ್ಚಿನ ವ್ಯಾಪಾರ ನಡೆಯುವುದರಿಂದ ಉತ್ತಮ ವಿನ್ಯಾಸದ ವಿದ್ಯುತ್ ಕಂಬಗಳಿಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ.</p>.<p>ಬೀದಿ ಬದಿ ತಿನಿಸುಗಳ ಮಾರಾಟದ ಸ್ಥಳದಲ್ಲಿ ಅಶುಚಿತ್ವ ತಾಂಡವವಾಡುತ್ತಿತ್ತು. ಕುಡಿಯುಲು ಶುದ್ಧ ನೀರು<br />ಇರಲಿಲ್ಲ. ತ್ಯಾಜ್ಯ ವಿಲೇವಾರಿಗೂ ಗ್ರಾಹಕರು ಪರದಾಡಬೇಕಿತ್ತು. ಖಾದ್ಯ ಸೇವಿಸಲು ಬಳಸುತ್ತಿದ್ದ ಪ್ಲೇಟ್,<br />ಲೋಟ್ಗಳನ್ನು ರಸ್ತೆ ಮತ್ತು ಮಹಾರಾಜ ಉದ್ಯಾನಕ್ಕೆ ಬಿಸಾಡುತ್ತಿದ್ದರು. ಸೊಳ್ಳೆ, ನೊಣಗಳ ಕಾಟವೂ<br />ಹೆಚ್ಚಾಗಿತ್ತು.</p>.<p>ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಚಿಂತನೆಗೆ ಒಳೆದದ್ದೇ ಫುಡ್ಕೋರ್ಟ್.ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರು ಮೊಬೈಲ್ ಕ್ಯಾಂಟೀನ್ ಮಾಲೀಕರೊಂದಿಗೆ ಸಭೆ ನಡೆಸಿದರು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲೇ ಯೋಜನೆ ರೂಪಿಸಿ, ಶುಚಿ ಆಹಾರಕ್ಕೆ ಫುಡ್ ಕೋರ್ಟ್ ಅನುಷ್ಠಾನಗೊಳಿಸಿದ್ದಾರೆ.</p>.<p>ಪಾನಿಪೂರಿ, ಇಡ್ಲಿ, ದೋಸೆ ಕ್ಯಾಂಟೀನ್, ಕಬಾಬ್ ಸೆಂಟರ್ಗಳಿವೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ<br />ಸಹ್ಯಾದ್ರಿ ವೃತ್ತದ ಮೂಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಬೀದಿಬದಿ ತಿನಿಸುಗಳ<br />ವರ್ತಕರು ಅಲ್ಲಿಂದಲೇ ನೀರು ಸಂಗ್ರಹಿಸಿ ಬಳಕೆ ಮಾಡಬೇಕು.</p>.<p>‘ಬಿಸಿಲು, ಮಳೆ, ಚಳಿ ಲೆಕ್ಕಿಸದೆ ವ್ಯಾಪಾರ ಮಾಡುತ್ತಿದ್ದೇವು. ಸಮಸ್ಯೆಗೆ ಪರಿಹಾರವಾಗಿ ಫುಡ್ ಕೋರ್ಟ್<br />ನಿರ್ಮಿಸಲಾಗಿದೆ. ಅಂಗಡಿಗಳ ನಡುವೆ 8 ರಿಂದ 10 ಅಡಿ ಜಾಗವಿದೆ. ಮಧ್ಯದಲ್ಲಿ ಬಣ್ಣದ ಟೈಲ್ಸ್ ಗಳನ್ನು<br />ಹಾಕಿದ್ದು, ಅಕ್ಕಪಕ್ಕದವರು ಕಿತ್ತಾಡುವುದು ತಪ್ಪುತ್ತದೆ’ ಎಂದು ತಳ್ಳುವ ಗಾಡಿ ವರ್ತಕರ ಸಂಘದ ಅಧ್ಯಕ್ಷ<br />ರಮೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ಊರು ನಮ್ಮ ಜಿಲ್ಲೆ</p>.<p>ಹಾಸನ: ರಸ್ತೆ ಬದಿ ತಿನಿಸುಗಳ ಮಾರಾಟಕ್ಕಾಗಿ ನಗರದ ಸಹ್ಯಾದ್ರಿ ರಸ್ತೆಯಲ್ಲಿ ₹1.5 ಕೋಟಿ ವೆಚ್ಚದಲ್ಲಿ ಫುಡ್ಕೋರ್ಟ್ ನಿರ್ಮಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ.</p>.<p>ಸಹ್ಯಾದ್ರಿ ವೃತ್ತದಿಂದ ಮಹಾವೀರ ವೃತ್ತದವರೆಗೂ ಸುಮಾರು 500 ಮೀಟರ್ ಉದ್ದ, ಏಳು ಅಡಿ ಅಗಲದ<br />ಗೆಲಾನಿಯಂ ಶೀಟ್ ಛಾವಣಿಯ ಶೆಲ್ಟರ್ಗಳನ್ನು ನಿರ್ಮಿಸಲಾಗಿದೆ. ನೆಲಕ್ಕೆ ಟೈಲ್ಸ್ ಅಳವಡಿಸಿದ್ದು, ಸ್ಟೀಲ್<br />ಬ್ಯಾರಿಕೇಡ್ ಅಳವಡಿಸಲಾಗಿದೆ.</p>.<p>ಶಾಸಕ ಪ್ರೀತಂ ಗೌಡ ಅವರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಮಾತ್ರವಲ್ಲದೇ ವಿವಿಧ ಮೂಲಗಳಿಂದಲೂ<br />ಫುಡ್ ಕೋರ್ಟ್ ನಿರ್ಮಾಣಕ್ಕೆ ಅಗತ್ಯವಾದ ಹಣ ಹೊಂದಿಸಲಾಗಿದೆ.</p>.<p>ಹಲವು ವರ್ಷಗಳಿಂದ ಸಹ್ಯಾದ್ರಿ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದ 88 ಜನರಿಗೆ ಅದೇ ಸ್ಥಳದಲ್ಲಿ<br />ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ. ತಿನಿಸು ಮಾರಾಟಗಾರರಿಗೆ ಸ್ಟೀಲ್ ಪ್ಯಾನಲ್ ಸಿದ್ದ<br />ಪಡಿಸಿಕೊಡೊಲಾಗಿದೆ. ಹಿಂಬದಿ ಕಾಂಪೌಂಡ್ಗೆ ಗ್ರಾಹಕರು ಪ್ಲೇಟ್ಗಳನ್ನಿಟ್ಟುಕೊಂಡು ಆಹಾರ ಸೇವಿಸಲು<br />ಸ್ಟ್ಯಾಂಡ್ ನಿರ್ಮಿಸಲಾಗಿದೆ.</p>.<p>ಸಾಮಾನ್ಯವಾಗಿ ಸಂಜೆ 4 ರಿಂದ ರಾತ್ರಿ 10ರವರೆಗೂ ಹೆಚ್ಚಿನ ವ್ಯಾಪಾರ ನಡೆಯುವುದರಿಂದ ಉತ್ತಮ ವಿನ್ಯಾಸದ ವಿದ್ಯುತ್ ಕಂಬಗಳಿಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ.</p>.<p>ಬೀದಿ ಬದಿ ತಿನಿಸುಗಳ ಮಾರಾಟದ ಸ್ಥಳದಲ್ಲಿ ಅಶುಚಿತ್ವ ತಾಂಡವವಾಡುತ್ತಿತ್ತು. ಕುಡಿಯುಲು ಶುದ್ಧ ನೀರು<br />ಇರಲಿಲ್ಲ. ತ್ಯಾಜ್ಯ ವಿಲೇವಾರಿಗೂ ಗ್ರಾಹಕರು ಪರದಾಡಬೇಕಿತ್ತು. ಖಾದ್ಯ ಸೇವಿಸಲು ಬಳಸುತ್ತಿದ್ದ ಪ್ಲೇಟ್,<br />ಲೋಟ್ಗಳನ್ನು ರಸ್ತೆ ಮತ್ತು ಮಹಾರಾಜ ಉದ್ಯಾನಕ್ಕೆ ಬಿಸಾಡುತ್ತಿದ್ದರು. ಸೊಳ್ಳೆ, ನೊಣಗಳ ಕಾಟವೂ<br />ಹೆಚ್ಚಾಗಿತ್ತು.</p>.<p>ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಚಿಂತನೆಗೆ ಒಳೆದದ್ದೇ ಫುಡ್ಕೋರ್ಟ್.ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರು ಮೊಬೈಲ್ ಕ್ಯಾಂಟೀನ್ ಮಾಲೀಕರೊಂದಿಗೆ ಸಭೆ ನಡೆಸಿದರು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲೇ ಯೋಜನೆ ರೂಪಿಸಿ, ಶುಚಿ ಆಹಾರಕ್ಕೆ ಫುಡ್ ಕೋರ್ಟ್ ಅನುಷ್ಠಾನಗೊಳಿಸಿದ್ದಾರೆ.</p>.<p>ಪಾನಿಪೂರಿ, ಇಡ್ಲಿ, ದೋಸೆ ಕ್ಯಾಂಟೀನ್, ಕಬಾಬ್ ಸೆಂಟರ್ಗಳಿವೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ<br />ಸಹ್ಯಾದ್ರಿ ವೃತ್ತದ ಮೂಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಬೀದಿಬದಿ ತಿನಿಸುಗಳ<br />ವರ್ತಕರು ಅಲ್ಲಿಂದಲೇ ನೀರು ಸಂಗ್ರಹಿಸಿ ಬಳಕೆ ಮಾಡಬೇಕು.</p>.<p>‘ಬಿಸಿಲು, ಮಳೆ, ಚಳಿ ಲೆಕ್ಕಿಸದೆ ವ್ಯಾಪಾರ ಮಾಡುತ್ತಿದ್ದೇವು. ಸಮಸ್ಯೆಗೆ ಪರಿಹಾರವಾಗಿ ಫುಡ್ ಕೋರ್ಟ್<br />ನಿರ್ಮಿಸಲಾಗಿದೆ. ಅಂಗಡಿಗಳ ನಡುವೆ 8 ರಿಂದ 10 ಅಡಿ ಜಾಗವಿದೆ. ಮಧ್ಯದಲ್ಲಿ ಬಣ್ಣದ ಟೈಲ್ಸ್ ಗಳನ್ನು<br />ಹಾಕಿದ್ದು, ಅಕ್ಕಪಕ್ಕದವರು ಕಿತ್ತಾಡುವುದು ತಪ್ಪುತ್ತದೆ’ ಎಂದು ತಳ್ಳುವ ಗಾಡಿ ವರ್ತಕರ ಸಂಘದ ಅಧ್ಯಕ್ಷ<br />ರಮೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>